ಸಮಾಜಮುಖಿ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ!
DAKHANI

POWER CITYNEWS:HUBBALLIಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಪ್ರಸಕ್ತ ಸಾಲಿನ ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಸಂಘದ 2025 ರ ವಾರ್ಷಿಕ ಪ್ರಶಸ್ತಿ ಈ ಕೆಳಗಿನಂತಿವೆ.
ಸಂಘದ ವತಿಯಿಂದ ಜು. 27ರಂದು ಆಯೋಜಿಸಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅತ್ಯುತ್ತಮ ನಗರ ವರದಿಗಾರಿಕೆಗೆ ನೀಡುವ ಲಿಂ. ಮುರಿಗೆಮ್ಮಾ ಬಸಪ್ಪ ಹೂಗಾರ ಪ್ರಶಸ್ತಿಯು ‘ವಿಜಯವಾಣಿ’ ಹಿರಿಯ ವರದಿಗಾರ ಮರಿದೇವ ಹೂಗಾರ ಅವರಿಗೆ ಲಭಿಸಿದೆ.
ಶ್ರೀಮತಿ ಕಮಲವ್ವ ಸೋಮಶೇಖರಪ್ಪ ಬುರ್ಲಬಡ್ಡಿ ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿಯು ಅಜೀಜ ಅಹ್ಮದ ಬಳಗಾನೂರ, ದಿ. ಶ್ರೀ ಸುಲೇಮಾನ್ ಅಬ್ದುಲ್ ಅಜೀಜಸಾಬ್ ಮುನವಳ್ಳಿ (ಪೊಲೀಸ್ ಇಲಾಖೆ) ಸ್ಮರಣಾರ್ಥ ನೀಡುವ ಅತ್ಯುತ್ತಮ ಲೇಖನ ಪ್ರಶಸ್ತಿಯು ಸುಷ್ಮಾ ಸವಸುದ್ದಿ, ಕೃಷಿ ಲೇಖನ ಪ್ರಶಸ್ತಿಯು ಕಲಾವತಿ ಬೈಚಬಾಳ, ಅತ್ಯುತ್ತಮ ಗ್ರಾಮೀಣ ವರದಿಗಾರಿಕೆಗೆ ನೀಡುವ ಜಿತೇಂದ್ರ ದಯಾಳಜಿ ಮಜೇಥಿಯಾ ಪ್ರಶಸ್ತಿ ಪ್ರಕಾಶ ಲಮಾಣಿ, ದಿ. ಕೃಷ್ಣಾಚಾರ್ಯ ರಾಘವಾಚಾರ್ಯ ಗಂಡಮಾಲಿ (ಮಾಮಾ) ಸ್ಮರಣಾರ್ಥ ನೀಡುವ ಅತ್ಯುತ್ತಮ ಲೇಖನ ಪ್ರಶಸ್ತಿ ವಿಜಯಕುಮಾರ ಬೆಳ್ಳೇರಿಮಠ, ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದ ಅತ್ಯುತ್ತಮ ಗ್ರಾಮೀಣ ಲೇಖನ ಪ್ರಶಸ್ತಿಯು ಪಲ್ಲಾದಗೌಡ ಗೊಲ್ಲಗೌಡರ, ದಿ. ರಾಮು ಆರ್. ಶೆಟ್ಟಿ ಸ್ಮರಣಾರ್ಥ ನೀಡುವ ಆಂಗ್ಲ ಭಾಷೆಯ ವರದಿಗಾರಿಕೆ ಪ್ರಶಸ್ತಿ ಸುಭಾಸಚಂದ್ರ ಎನ್.ಎಸ್. ಅವರಿಗೆ ಲಭಿಸಿದೆ.
ಅತ್ಯುತ್ತಮ ನಗರ ವರದಿಗಾರಿಕೆಗೆ ಲಭಿಸಿದ ಪುರಸ್ಕಾರಅತ್ಯುತ್ತಮ ತನಿಖಾ ವರದಿಗೆ ನೀಡುವ ಶ್ರೀಮತಿ ಲೀಲಾವತಿ ವಿಶ್ವನಾಥ ಶೆಟ್ಟಿ ಪ್ರಶಸ್ತಿ ಹರ್ಷ ಕುಲಕರ್ಣಿ, ಸಾಹಿತಿ ದಿ. ಎಂ.ಡಿ. ಗೋಗೇರಿ ಸ್ಮರಣಾರ್ಥ ನೀಡುವ ಅತ್ಯುತ್ತಮ ಛಾಯಾಚಿತ್ರ ಪ್ರಶಸ್ತಿಯು ಗೋವಿಂದ ಜವಳಿ, ಅತ್ಯುತ್ತಮ ಪುಟ ವಿನ್ಯಾಸಕ್ಕೆ ನೀಡುವ ಡಾ. ಬಿ.ಎಫ್. ದಂಡಿನ ಪ್ರಶಸ್ತಿಯು ಸಾಯಿರಾಮ ಪವಾರ, ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡುವ ಅತ್ಯುತ್ತಮ ಪುಟ ವಿನ್ಯಾಸ ಪ್ರಶಸ್ತಿ ಆನಂದ ಭಜಂತ್ರಿ, ಲಕ್ಷ್ಮೀ ನಾರಾಯಣ ದತ್ತಿಯಿಂದ ನೀಡುವ ಉದಯೋನ್ಮುಖ ಪತ್ರಕರ್ತ ಪ್ರಶಸ್ತಿಯು ಶಾನು ಯಲಿಗಾರ, ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡುವ ಸ್ತ್ರೀಸಬಲೀಕರಣ ವಿಶೇಷ ಪ್ರಶಸ್ತಿಯು ನೀಲಮ್ಮ ಕೊಟ್ಟೂರಶೆಟ್ಟರ ಅವರಿಗೆ ಲಭಿಸಿದೆ.