ಸ್ಥಳೀಯ ಸುದ್ದಿ
ಅವಳಿ ನಗರದ ಅಭಿವೃದ್ಧಿಗಾಗಿ ಸಿಎಂ ಭೇಟಿಯಾದ ಮೇಯರ್
![](https://www.powercity.news/wp-content/uploads/2022/06/Screenshot_2022-06-19-16-40-32-995_com.whatsapp.jpg)
ಧಾರವಾಡ
ಇಂದು ಹುಬ್ಬಳ್ಳಿ ನಗರಕ್ಕೆ ಆಗಮಿಸಿದ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ರವರನ್ನು ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ಅವರು ಭೇಟಿ ಮಾಡಿ, ಮನವಿ ಪತ್ರವನ್ನು ಸಲ್ಲಿಸಿದ್ರು.
![](http://powercity.news/wp-content/uploads/2022/06/IMG_20220619_163853.jpg)
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬರುವಂಥ 110 ಕೋಟಿ ರೂಪಾಯಿ ಬಾಕಿ ಹಣ, ಪಿಂಚಣಿ ಹಣ 121 ಕೋಟಿ, ವಿದ್ಯುತ್ ಶುಲ್ಕದ ಬಾಕಿ ಹಣ 64 ಕೋಟಿ, ಅಂದರೆ ಒಟ್ಟು 295 ಕೋಟಿ ಹಣವನ್ನು ಬಿಡುಗಡೆ ಮಾಡಬೇಕೆಂದು ಮನವಿ ಪತ್ರ ಸಲ್ಲಿಸಲಾಯಿತು.
![](http://powercity.news/wp-content/uploads/2022/06/IMG_20220619_163840.jpg)
ಸಿಎಂ ಸಹ ಇದಕ್ಕೆ ಸ್ಪಂದಿಸಿ, ಕೂಡಲೇ ಸಂಬಂಧಪಟ್ಟವರಿಗೆ ತಿಳಿಸುವುದಾಗಿ ಹೇಳಿದರು. ಮನವಿ ಪತ್ರದ ಪ್ರತಿಗಳನ್ನು, ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ ರವರಿಗೆ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ ಶೆಟ್ಟರ ರವರಿಗೆ ಹಾಗೂ ಶ್ರೀ ಬಸವರಾಜ ಹೊರಟ್ಟಿ ರವರಿಗೂ ಕೂಡ ಸಲ್ಲಿಸಲಾಯಿತು.