assemblyBJPBREAKING NEWSDHARWADHubballiL&TLife StyleNAVANAGARTWINCITY

ಮುಖ್ಯ ದ್ವಾರಕ್ಕೆ ಕನ್ನಡವೆ ಆಕರ್ಷಣೆಯಾಗಿರಲಿ ವಿಪ ಉಪ ನಾಯಕ ಅರವಿಂದ ಬೆಲ್ಲದ್!

DAKHANI

POWER CITY NEWS: HUBBALLIಧಾರವಾಡ: ಇತ್ತೀಚೆಗಷ್ಟೇ ಧಾರವಾಢ ಶಹರದ ರೈಲು ನಿಲ್ದಾಣ ನವಿಕೃತ ಗೊಂಡಿದ್ದು ಇದೀಗ ರೈಲು ಪ್ರಯಾಣಿಕರಿಗೆ ಹೈಟೆಕ್ ಟಚ್ ಪಡೆಯುವುದರೊಂದಿಗೆ ಆಕರ್ಷಣಿವಾಗಿ ಕಂಗೊಳಿಸುತ್ತಿದೆ.

ಆದರೆ ಕೇಂದ್ರ ಸರ್ಕಾರದ ಅಮೃತ್ ಭಾರತ್ ಸ್ಟೇಷನ್‌ ಯೋಜನೆಯಡಿಯಲ್ಲಿ 17.1ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಧಾರವಾಢ ರೈಲು ನಿಲ್ದಾಣ ಸಂಪೂರ್ಣ ಅಭಿವೃದ್ಧಿಗೊಂಡರು ಸಹ ಸ್ವತಃ ಶಾಸಕ ಹಾಗೂ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಸೇರಿದಂತೆ ಸಾಕಷ್ಟು ಕನ್ನಡಪರ ಅಭಿಮಾನಿಗಳಿಗೆ ಒಂದಷ್ಟು ಬೇಸರ ಮೂಡಿದೆ. ಇದನ್ನು ಮನಗಂಡಿರುವ ಅರವಿಂದ ಬೆಲ್ಲದವರು ವಿಭಾಗೀಯ ರೈಲು ನಿಲ್ದಾಣ ವ್ಯವಸ್ಥಾಪಕರಿಗೆ ಪತ್ರ ಬರೆಯುವ ಮೂಲಕ ಧಾರವಾಢ ರೈಲು ನಿಲ್ದಾಣದಲ್ಲಿನ ಮುಖ್ಯ ದ್ವಾರಕ್ಕೆ ಹಿಂದಿಯಲ್ಲಿ ಧಾರವಾಢ ಹಾಗೂ ಮೂಲೆಯಲ್ಲಿರುವ “ಧಾರವಾಢ” ಎಂಬ ನಿಲ್ದಾಣದ ಹೆಸರನ್ನು ಹಿಂದಿಯ ಬದಲಾಗಿ ಕನ್ನಡ ಪದಬಳಕೆಯಾಗಿ “ಧಾರವಾಢ”ವನ್ನು ಅಚ್ಚುಕಟ್ಟಾಗಿ ಮಧ್ಯ ಭಾಗದಲ್ಲಿ ಸೇರಿಸುವ ಮುಖಾಂತರ ಕನ್ನಡಕ್ಕೆ ಮೊದಲ ಆದ್ಯತೆಯಾಗಲಿ ಎಂದು ಪತ್ರ ಬರೆದಿದ್ದಾರೆ.

Related Articles

Leave a Reply

Your email address will not be published. Required fields are marked *