ಧಾರವಾಡ
ಪೌರಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ಕೊಡುವುದರ ಮೂಲಕ ಕೇಂದ್ರ ಸಚಿವರ ಬರ್ತಡೆ ಆಚರಣೆ
![](https://www.powercity.news/wp-content/uploads/2021/11/IMG-20211127-WA0052.jpg)
ಧಾರವಾಡ
ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಆದ ಪ್ರಲ್ಹಾದ ಜೋಶಿಯವರ ___59 ನೇ ಹುಟ್ಟುಹಬ್ಬದ ಅಂಗವಾಗಿ ಇಂದು ಧಾರವಾಡದ ಕೊಪ್ಪದಕೇರಿ ಶಿವಾಲಯದಲ್ಲಿ ಪೂಜೆ ಸಲ್ಲಿಸಿ, ಪಾಲಿಕೆ ಪೌರಕಾರ್ಮಿಕರಿಗೆ ಬ್ಲಾಂಕೆಟ ಹಾಗು ಸ್ವೀಟಬಾಕ್ಸ ನೀಡಿ ಅರ್ಥಪೂರ್ಣವಾಗಿ ಕೇಂದ್ರ ಸಚಿವರ ಹುಟ್ಟುಹಬ್ಬ ಆಚರಿಸಲಾಯಿತು..
![](http://powercity.news/wp-content/uploads/2021/11/IMG-20211127-WA0049.jpg)
![](http://powercity.news/wp-content/uploads/2021/11/IMG-20211127-WA0053.jpg)
![](http://powercity.news/wp-content/uploads/2021/11/IMG-20211127-WA0050.jpg)
ಇದೇ ಸಂದರ್ಭದಲ್ಲಿ, ಪಾಲಿಕೆಯ ಸದಸ್ಯರಾದ ಶ್ರೀ ಈರೇಶ ಅಂಚಟಗೇರಿ ನೇತೃತ್ವದಲ್ಲಿ ಅಸಂಘಟಿತ ಕಾರ್ಮಿಕ ವರ್ಗಕ್ಕೆ ಕಾರ್ಮಿಕರ ಕಾರ್ಡ ಇಶ್ರಮಕಾರ್ಡ ಉಚಿತವಾಗಿ ಮಾಡಿಕೊಟ್ಟು ಆಗಮಿಸಿದ ಸಮಸ್ತರಿಗೂ ಶುಭಕೋರಲಾಯಿತು..
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರು ಈರೇಶ ಅಂಚಟಗೇರಿ, ಸುನೀಲಮೋರೆ, ಶೇಕರ ಕವಳಿ, ಮಂಜುನಾಥ ನೀರಲಕಟ್ಟಿ , ಬಸು ಬಾಳಗಿ ಶಂಕರ ಪರಿಟ, ಶ್ರೀಕಾಂತ ರಾಶನಕರ. ಹರೀಶ ಮಣಕವಾಡ, ಬಸವರಾಜ ಕೆಂಚನಳ್ಳಿ, ಅಶೋಕ ಶೆಟ್ಟರ, ಹಾಗು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು