ಸ್ಥಳೀಯ ಸುದ್ದಿ
ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ವಿನಯ ಕುಲಕರ್ಣಿ ಪ್ರಮಾಣ ವಚನ
![](https://www.powercity.news/wp-content/uploads/2023/05/Screenshot_20230522_201420_WhatsApp-2.jpg)
ಬೆಂಗಳೂರು
ದೇಶದ ಹಾಗೂ ರಾಜ್ಯದ ಗಮನ ಸೆಳೆದಿದ್ದ, ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ಮಾಜಿ ಸಚಿವ ವಿನಯ ಕುಲಕರ್ಣಿ, ಇತಿಹಾಸ ಸೃಷ್ಟಿ ಮಾಡಿದ್ದಾರೆ.
![](https://powercity.news/wp-content/uploads/2023/05/Screenshot_20230522_201420_WhatsApp-3.jpg)
3 ವರ್ಷದಿಂದ ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಕಾಲಿಡದೇ ಗಡಿ ಭಾಗದಲ್ಲಿ ಇದ್ದುಕೊಂಡು ರಾಜಕೀಯ ಚಾಕಚಕ್ಯತೆಯಿಂದ ಶಾಸಕರಾಗಿ ಆಯ್ಕೆ ಆದ ಇವರು ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು.
ಧಾರವಾಡ ಗ್ರಾಮೀಣ ಕ್ಷೇತ್ರದಿಂದ 3 ಬಾರಿ ಆಯ್ಕೆ ಆಗಿರುವ ವಿನಯ ಕುಲಕರ್ಣಿ ಅವರು, ಸಿಎಂ ಸಿದ್ದರಾಮಯ್ಯಾ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಅತ್ಯಾಪ್ತರು.
ವಿನಯ ಕುಲಕರ್ಣಿ ಅವರಿಗೆ
ಈ ಬಾರಿ ಕ್ಯಾಬಿನೇಟನಲ್ಲಿ ಉತ್ತಮ ಕಾರ್ಯನಿರ್ವಹಣೆಯ ಜವಾಬ್ದಾರಿ ಕೊಡುವ ಸಾಧ್ಯತೆಗಳು ಹೆಚ್ಚಿವೆ ಎನ್ನುವ ಮಾತುಗಳು ಬೆಂಗಳೂರಿನಲ್ಲಿ ಹರಿದಾಡುತ್ತಿವೆ.