ರಾಜಕೀಯ

ಗ್ರಾಮೀಣ ಭಾಗದಲ್ಲಿ ಕೈ ಬಲಪಡಿಸಲು ಕಮಲಕ್ಕೆ ಬೈ… ಬೈ….ಹೇಳಿದ್ರಾ? ಅರವಿಂದ ಏಗನಗೌಡರ್ …..

ಧಾರವಾಡ

ಹೌದು ಇಂತಹದೊಂದು ಚರ್ಚೆ ಕಳೆದ 2 ದಿನಗಳಿಂದ ಧಾರವಾಡ ಜಿಲ್ಲೆಯಲ್ಲಿ ನಡೆಯುತ್ತಿದೆ.

ಮೊನ್ನೆಯಷ್ಟೇ ಸೂಕ್ತ ಸ್ಥಾನಮಾನಕ್ಕಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮುಂದೆ ಮಾತನಾಡಿಕೊಂಡಿದ್ದ ಅರವಿಂದ ಏಗನಗೌಡರ ಅವರಿಗೆ, ನಳೀನಕುಮಾರ ಕಟೀಲ್ ಅವರನ್ನು ಕೇಳ್ರಿ ಎಂದಾಗ ಅಸಮಾಧಾನಗೊಂಡು ರಾಜಿನಾಮೆ ನೀಡಿದ್ರು.

ಬಿಜೆಪಿ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದೇ ಹೋಗಿ, ಕಮಲ ಪಕ್ಷದಿಂದ ಹೊರಗಡೆ ಬಂದಿರುವ ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದ ಪ್ರಭಾವಿ‌ ಮುಖಂಡ ಅರವಿಂದ‌ ಏಗನಗೌಡರ್ ಕಾಂಗ್ರೆಸ್ ಪಕ್ಷ ಸೇರುವುದು ಬಹುತೇಕ ಖಚಿತವಾಗಿದೆ.

ಈಗಾಗಲೇ ಈ ಬಗ್ಗೆ ಕಾಂಗ್ರೆಸ್ನ ಜಿಲ್ಲಾ ಮಟ್ಟದ ಹಿರಿಯ ನಾಯಕರೊಂದಿಗೆ ಅರವಿಂದ ಏಗನಗೌಡರ್ ಮಾತನಾಡಿದ್ದಾರೆ.

ಅರವಿಂದ ಏಗನಗೌಡ್ರ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಬಲಪಡಿಸುತ್ತಾರೆ‌ ಎನ್ನುವ ವಿಶ್ವಾಸವನ್ನು ಕೈ ಪಾರ್ಟಿ ಖಚಿತಪಡಿಸಿಕೊಂಡಿದೆ.

Related Articles

Leave a Reply

Your email address will not be published. Required fields are marked *

Back to top button