ಸ್ಥಳೀಯ ಸುದ್ದಿ

ಚಿಣ್ಣರ ಬೇಸಿಗೆ ಶಿಬಿರ ಉದ್ಘಾಟನೆ

ಧಾರವಾಡ

ಯುವಾ ಡ್ಯಾನ್ಸ್ ಅಕಾಡೆಮಿಯ ಬೇಸಿಗೆ ಶಿಬಿರದ ಕಾರ್ಯಕ್ರಮವನ್ನು ಜಯನಗರದಲ್ಲಿ ಉದ್ಘಾಟಿಸಲಾಯಿತು.

ಮೀಡಿಯಾ ಕ್ಲಬ್ ಅಧ್ಯಕ್ಷರಾದ ಮುಸ್ತಫಾ ಕುನ್ನಿಭಾವಿ, ಹಾಗೂ ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾ ಅಧ್ಯಕ್ಷರಾದ ಗಿರೀಶ್ ಪೂಜಾರ ಮತ್ತು ಅಕಾಡೆಮಿಯ ಮುಖ್ಯಸ್ಥರು ಆದ ರಮೇಶ್ ಪಾಟೀಲ್ ಹಾಗೂ ಮುದ್ದು ಮಕ್ಕಳು ಕಾರ್ಯಕ್ರಮ ಉದ್ಘಾಟಿಸಿದ್ರು.

ನಂತರ ಧಾರವಾಡ ಮೀಡಿಯಾ ಕ್ಲಬ್ ಅಧ್ಯಕ್ಷಾದ ಮುಸ್ತಫಾ ಕುನ್ನಿಭಾವಿ ಅವರು ಮಾತನಾಡಿ, ಮುದ್ದು ಮಕ್ಕಳನ್ನು ವಿದ್ಯಾಭ್ಯಾಸದಲ್ಲಿ ಉತ್ಸುಕರನ್ನಾಗಿ ಮಾಡಲು ಇಂತಹ ಕಾರ್ಯಕ್ರಮ ತುಂಬಾ ಅನುಕೂಲಕರವಾಗಲಿವೆ. ಸುಮಾರು ಹತ್ತುವರ್ಷಗಳಿಂದ ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ಯುವಾ ಡಾನ್ಸ್ ಅಕಾಡೆಮಿಯು ಇಂತಹ ನೂರಾರು ಕಾರ್ಯಕ್ರಮ ನಡೆಸುತ್ತಾ ಬಂದಿದೆ. ಇಂತಹ ಕಾರ್ಯಕ್ರಮಗಳಿಗೆ ನಾವೆಲ್ಲ ಕೈ ಜೋಡಿಸುತ್ತೇವೆ.


ಎಲ್ಲ ಮಕ್ಕಳಿಗೂ ಯುವಾ ಡಾನ್ಸ್ ಅಕಾಡೆಮಿಗೂ ಶುಭವಾಗಲಿ ಎಂದು ಶುಭಕೋರಿದರು.

Related Articles

Leave a Reply

Your email address will not be published. Required fields are marked *

Back to top button