ಸ್ಥಳೀಯ ಸುದ್ದಿ

ತ್ರಿವಳಿ ರೈಲು ದುರಂತ‌ ಹಿನ್ನೆಲೆ ಕೊಲ್ಕತ್ತಾದಲ್ಲಿ ಸಿಲುಕಿದ್ದ ಕ್ರೀಡಾಪಟುಗಳ ರಕ್ಷಣೆಗೆ ಧಾವಿಸಿದ ಸಚಿವ ಸಂತೋಷ ಲಾಡ್

ಬೆಂಗಳೂರು

ಕಲ್ಕತಾದಲ್ಲಿ ನಡೆಯುತ್ತಿರುವ 16 ವರ್ಷದೊಳಗಿನ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಗೆ ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡ ತೆರಳಿತ್ತು, ನಿನ್ನೆ ನಡೆದ ರೈಲು ದುರಂತದ ಪರಿಣಾಮವಾಗಿ ಮರಳಿ ರಾಜ್ಯಕ್ಕೆ ಬರಲು ಪರಿತಪಿಸುತ್ತಿದ್ದ ತಂಡಕ್ಕೆ ರಾಜ್ಯ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ಸಹಾಯ ಹಸ್ತ ಚಾಚಿದ್ದಾರೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯಾ ಅವರು ಮುತುವರ್ಜಿ ವಹಿಸಿ ಕ್ರೀಡಾಪಟುಗಳ ನೆರವಿಗೆ ಲಾಡ ಅವರನ್ನು ಕಳುಹಿಸಿದ್ದಾರೆ.‌

ತಂಡದ ತರಬೇತುದಾರರು ಸೇರಿದಂತೆ 32 ಸದಸ್ಯರನ್ನೊಳಗೊಂಡ ತಂಡಕ್ಕೆ ಲಾಡ್ ಅವರು ಕಲ್ಕತ್ತಾದಿಂದ ಬೆಂಗಳೂರಿಗೆ ವಿಮಾನ ಟಿಕೆಟ್ ಹಾಗೂ ಸೂಕ್ತ ವಸತಿ‌, ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button