ಸ್ಥಳೀಯ ಸುದ್ದಿ

ಹಂಗರಕಿಯಲ್ಲಿ ವ್ಯಕ್ತಿ ಶವ ಪತ್ತೆ.

ಧಾರವಾಡ

ಧಾರವಾಡ ಗ್ರಾಮೀಣ ಶಾಸಕರ ಊರು ಹಂಗರಕಿಯಲ್ಲಿ ವ್ಯಕ್ತಿಯೊಬ್ಬನ ಶವ ಹೊಲದಲ್ಲಿ ಪತ್ತೆಯಾಗಿದೆ.

ಮನೆಯ ಮಂದಿ ಟ್ರ್ಯಾಕ್ಟರ್ ಹೊಡೆದುಕೊಂಡಿದ್ದವ ನಾಪತ್ತೆಯಾಗಿದ್ದಾನೆ ಸರ್ ಹುಡುಕಿ ಕೊಡಿ ಎಂದು ಹೊಳಿ ಹಬ್ಬದ ದಿನ ಬೆಳಿಗ್ಗೆ ಗರಗ ಪೊಲೀಸ್ ಠಾಣೆಗೆ ತೆರಳಿ ದೂರು ಕೊಟ್ಟಿದ್ದರು.

ಹಂಗರಕಿ ಗ್ರಾಮದ
ಕರಿಗುಳಪ್ಪ ನೆಗಿನಾಳ( 46 ) ಕುಟುಂಬಸ್ಥರಿಗೆ,
ಇಂದು ಸಂಜೆಯ ಹೊತ್ತಿಗೆ ಕರಿಗುಳಪ್ಪನ ಮೃತದೇಹ‌ ಹೊಲವೊಂದರಲ್ಲಿ ಪತ್ತೆಯಾಗಿ, ಬರಸಿಡಿಲು ಬಡಿದಂತೆ ಆಗಿದೆ.

ಈತನ ಸಾವು ಹೇಗಾಗಿದೆ ಎನ್ನುವುದು ಕುಟುಂಬಸ್ಥರಿಗೂ ಗೊತ್ತಾಗುತ್ತಿಲ್ಲಾ.

ಇದು ಅನುಮಾನಾಸ್ಪದ ಸಾವು ಎಂದು ಮೃತನ ಮನೆಯವರು ಪೊಲೀಸರಿಗೆ ಮತ್ತೆ ದೂರು ಕೊಟ್ಟಿದ್ದಾರೆ.

ಮೃತನ ಸಾವಿನ ಬಗ್ಗೆ ಗರಗ ಠಾಣೆ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button