ಧಾರವಾಡ

ಅತಿವೃಷ್ಟಿಗೆ ಮನೆ ಬಿತ್ತು. ಬೆಳೆಯೂ ಹಾನಿಯಾತು. ಜಿಲ್ಲಾಧಿಕಾರಿಗಳೇ ಇವರ ಸಮಸ್ಯೆ‌ ನೋಡಿ….

ಧಾರವಾಡ

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಅಕಾಲಿಕ ಮಳೆಗೆ ಧಾರವಾಡ ತಾಲೂಕಿನ ಮನಸೂರ ಗ್ರಾಮದಲ್ಲಿ
ಕರೆಪ್ಪ ಅರಳಿಕಟ್ಟಿ ಎಂಬುವವರ ಮನೆ ಕುಸಿತ ಆಗಿದೆ.‌

ಸತತ ಮಳೆಯಿಂದಾಗಿ ಮನೆ ಕುಸಿದ ಪರಿಣಾಮ ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ.

ನಿನ್ನೆ ರಾತ್ರಿ ಮನೆ ಮಂದಿ ಮಲಗಿದ ಸಂದರ್ಭದಲ್ಲಿ ಏಕಾಕಿ ಮನೆ ಬಿದ್ದ ಪರಿಣಾಮ ಕುಟುಂಬಸ್ಥರು ಸಂಕಷ್ಟದಲ್ಲಿದ್ದಾರೆ.‌

ಮಳೆಯಿಂದ ಭತ್ತ ಹಾಗೂ ಗೋವಿನ ಜೋಳದ ಬೆಳೆ ನಾಶದ ನಡುವೆ ಮನೆ ಕಳೆದುಕೊಂಡಿದೆ ಈ ಕುಟುಂಬ.

ಇಂಥ ಕಷ್ಟದ ನಡುವೆ ಸರ್ಕಾರದ ನೆರವು ಬಯಸುತ್ತಿದೆ ಕರೆಪ್ಪ ಅರಳಿಕಟ್ಟಿ ಕುಟುಂಬ.

ಅತ್ತ ಬೆಳೆ ಇಲ್ಲದೆ ಇತ್ತ ಮನೆ ಇಲ್ಲದೆ ಕರೆಪ್ಪ ಕಂಗಾಲಾಗಿದ್ದು, ಅಧಿಕಾರಿಗಳ ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button