ಸ್ಥಳೀಯ ಸುದ್ದಿ

ಅಭಿನವ ಶಾಂತಲಿಂಗ ಶ್ರೀಗಳ ಇಷ್ಟಲಿಂಗ ಮಹಾಪೂಜೆ ಆರಂಭ


ಧಾರವಾಡ

ಶ್ರಾವಣ ಮಾಸದ ಅಂಗವಾಗಿ ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದಲ್ಲಿ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳಿಂದ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಶುಕ್ರವಾರ ಪ್ರಾತಃಕಾಲ ಆರಂಭಗೊಂಡಿತು.

ಸಮಸ್ತ ಮನುಕುಲದ ಒಳಿತಿಗಾಗಿ ಮಹಾಸಂಕಲ್ಪ ಪೂಜೆಯನ್ನು ನೆರವೇರಿಸಿದ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯರು ಇಷ್ಟಲಿಂಗಕ್ಕೆ ಪಂಚಾಮೃತವೂ ಸೇರಿದಂತೆ ಗಂಧೋದಕ, ಪುಷ್ಪೋದಕ, ಮಂತ್ರೋದಕಗಳಿಂದ ಮಜ್ಜನಗೈದರು. ನಿರಂತರ ರುದ್ರಪಠಣದ ಮಧ್ಯೆ ಏಕಾದಶ ರುದ್ರಾಭಿಷೇಕ ಮಹಾಪೂಜೆಯನ್ನೂ ಅವರು ನೆರವೇರಿಸಿದರು.

ನೂರೆಂಟು ಶಿವನಾಮ ಸ್ಮರಣೆಯೊಂದಿಗೆ ಬಿಲ್ವದಳ ಹಾಗೂ ವಿವಿಧ ಪುಷ್ಪಗಳೊಂದಿಗೆ ವಿಶೇಷ ಅಲಂಕಾರ ಪೂಜೆಗೈದ ಶ್ರೀಗಳು, ಮಹಾಮಂಗಳಾರತಿಯ ನಂತರ ಧ್ಯಾನದ ಅನುಸಂಧಾನದಲ್ಲಿ ಇಷ್ಟಲಿಂಗಕ್ಕೆ ಭಕ್ತಿಯ ಪ್ರಾರ್ಥನೆ ಸಲ್ಲಿಸಿದರು. ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಇದ್ದರು. ಇಷ್ಟಲಿಂಗ ಮಹಾಪೂಜೆಯಲ್ಲಿ ಪಾಲ್ಗೊಂಡಿದ್ದ ಭಕ್ತ ಸಮೂಹಕ್ಕೆ ನಂತರ ದಾಸೋಹ ಸೇವೆಯಲ್ಲಿ ಪ್ರಸಾದ ವಿತರಣೆ ಜರುಗಿತು.

Related Articles

Leave a Reply

Your email address will not be published. Required fields are marked *

Back to top button