ಸ್ಥಳೀಯ ಸುದ್ದಿ
ಅಮೃತ ನಡಿಗೆ ಕಾರ್ಯಕ್ರಮ
![](https://www.powercity.news/wp-content/uploads/2022/08/IMG-20220811-WA0011.jpg)
ಧಾರವಾಡ
ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವತಿಯಿಂದ ಅಮೃತ ನಡಿಗೆ ಕಾರ್ಯಕ್ರಮವನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ನೇತೃತ್ವದಲ್ಲಿ, ನಡೆಯಿತು.
ಧಾರವಾಡದ 71 ಘಟಕದ ಶಾಸಕರಾದ ಅಮೃತ ದೇಸಾಯಿಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು.
![](https://powercity.news/wp-content/uploads/2022/08/IMG-20220811-WA0007-1.jpg)
![](https://powercity.news/wp-content/uploads/2022/08/IMG-20220811-WA0011-1.jpg)
ಜೆ.ಎಸ್.ಎಸ್ ಶಾಲಾ ಆವರಣದಿಂದ, ಟೋಲ್ ನಾಕಾ, ಕೋರ್ಟ್ ಸರ್ಕಲ್, ಜುಬಿಲಿ ಸರ್ಕಲ್ ಮಾರ್ಗವಾಗಿ ದೇಶಾಭಿಮಾನದ ಘೋಷಣೆ ಮಾಡುತ್ತ ನಡಿಗೆಯ ಮೂಲಕ ಕಡಪಾ ಮೈದಾನವನ್ನು ತಲುಪಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಸಭಾನಾಯಕರಾದ ತಿಪ್ಪಣ್ಣ ಮಜ್ಜಿಗಿ, ಮಹಾನಗರ ಜಿಲ್ಲಾಧ್ಯಕ್ಷರಾದ ಸಂಜಯ ಕಪಟಕರ, ಪಾಲಿಕೆಯ ಸದಸ್ಯರಾದ ಸುರೇಶ ಬೆದರೆ ರವರು, ಶಂಭು ಸಾಲಿಮನಿ ಲಕ್ಷ್ಮಿ ಹಿಂಡಸಗೇರಿ, ನೀಲಮ್ಮ ಅರವಳದ, ಬಿಲಕಿಸಬಾನು ಮುಲ್ಲಾ, ಪಾಲಿಕೆಯ ಆಯುಕ್ತರಾದ ಗೋಪಾಲಕೃಷ್ಣ , ಪಾಲಿಕೆಯ ವಲಯ ಸಹಾಯಕ ಆಯುಕ್ತರಾದ ಆರ್.ಎಂ. ಕುಲಕರ್ಣಿ, ಪಾಲಿಕೆಯ ಅಧಿಕಾರಿಗಳು,ಶಾಲಾ ಶಿಕ್ಷಕರು, ಹಾಗೂ ವಿದ್ಯಾರ್ಥಿಗಳು, ಉಪಸ್ಥಿತರಿದ್ದರು
![](https://powercity.news/wp-content/uploads/2022/08/IMG-20220811-WA0007.jpg)