ಸ್ಥಳೀಯ ಸುದ್ದಿ
ಎಪ್ರೀಲ್ 20 ರಂದು ನಾಳೆ ಕಾಂಗ್ರೆಸ ಅಭ್ಯರ್ಥಿ ವಿನಯ ಕುಲಕರ್ಣಿ ನಾಮಪತ್ರ ಸಲ್ಲಿಕೆ ಮಾಡಲು ನಿರ್ಧಾರ
![](https://www.powercity.news/wp-content/uploads/2023/04/IMG_20230419_100742.jpg)
ಧಾರವಾಡ
ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ ಅಭ್ಯರ್ಥಿಯಾಗಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ನಾಳೆ ಎಪ್ರೀಲ್ 20 ರಂದು ನಾಮಪತ್ರ ಸಲ್ಲಿಸಲು ನಿರ್ಧಾರ ಮಾಡಿದ್ದಾರೆ.
![](https://powercity.news/wp-content/uploads/2023/04/IMG-20230419-WA0002.jpg)
ಕ್ಷೇತ್ರದಿಂದ ಹೊರಗೆ ಇರುವ ವಿನಯ ಕುಲಕರ್ಣಿ ಅವರು ಸೂಚಕರ ಮೂಲಕ ನಾಳೆಗೆ ನಾಮಪತ್ರ ಸಲ್ಲಿಸಲಿದ್ದಾರೆ.
ಈಗಾಗಲೇ ಒಂದು ಸೆಟ್ ನಾಮಪತ್ರ ಸಲ್ಲಿಸಿರುವ ಮಾಜಿ ಸಚಿವರು ನಾಳೆಗೆ ಅಭಿಮಾನಿಗಳು, ಪಕ್ಷದ ಬೆಂಬಲಿಗರೊಂದಿಗೆ ಮುರಘಾಮಠದಿಂದ ಬೃಹತ್ ಮೆರವಣಿಗೆ ಮೂಲಕ ಪಾದಯಾತ್ರೆ ತೆರಳಿ ಎಸಿ ಕಚೇರಿಯಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದಾರೆ.
ಬೆಂಗಳೂರಿನಿಂದಲೇ ವಿಡಿಯೋ ಬಿಡುಗಡೆ ಮಾಡಿರುವ ಮಾಜಿ ಸಚಿವರು ಬೃಹತ್ ಸಂಖ್ಯೆಯಲ್ಲಿ ಬಂದು ತಮಗೆ ಬೆಂಬಲ ಸೂಚಿಸಲು ಮನವಿ ಮಾಡಿದ್ದಾರೆ.