ಧಾರವಾಡ

ಕನ್ನಡ ಸಾಹಿತ್ಯ ಪರಿಷತ್ ಧಾರವಾಡ ಜಿಲ್ಲಾದ ಅಧ್ಯಕ್ಷರಾಗಿ 3 ನೇ ಬಾರಿ ಆಯ್ಕೆಯಾದ ಲಿಂಗರಾಜ್ ಅಂಗಡಿ

ಧಾರವಾಡ

ಧಾರವಾಡ ಜಿಲ್ಲಾ ಕಸಾಪ‌ದ ಅಧ್ಯಕ್ಷರಾಗಿ ಪ್ರಾಧ್ಯಾಪಕರೂ ಆಗಿರುವ ಲಿಂಗರಾಜ ಅಂಗಡಿ ಅವರು‌ 24 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಸಾಹಿತ್ಯ ಪರಿಷತ್ ನಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ‌ ಲಿಂಗರಾಜ್ ಅಂಗಡಿ ಅವರು ಈಗಾಗಲೇ 2ಬಾರಿ‌ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿ ‌ಕೆಲಸ ಮಾಡಿದ್ದಾರೆ.

ಮತ್ತೊಮ್ಮೆ ಆಯ್ಕೆ ಆಗುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.

ಪ್ರತಿಸ್ಪರ್ಧಿ ರಾಮು ಮೂಲಗಿ ಅವರನ್ನು ‌ಸೋಲಿಸಿ ಮತ್ತೊಮ್ಮೆ ಸಾಹಿತ್ಯ ಪರಿಷತನ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಲಿಂಗರಾಜ್ ಅಂಗಡಿ ಅವರು

ರಾಮು‌ಮೂಲಗಿ ಅವರು 1220 ಮತಗಳನ್ನು ಪಡೆದ್ರೆ ಲಿಂಗರಾಜ ಅಂಗಡಿ ಅವರು 1244 ಮತಗಳನ್ನು‌ ಪಡೆದಿದ್ದಾರೆ. ಒಟ್ಟು 24 ಮತಗಳ‌ ಅಂತರದಿಂದ ಲಿಂಗರಾಜ ಅಂಗಡಿ ಅವರು‌ ಗೆಲುವು ಸಾಧಿಸಿದ್ದಾರೆ.‌

Related Articles

Leave a Reply

Your email address will not be published. Required fields are marked *

Back to top button