ಸ್ಥಳೀಯ ಸುದ್ದಿ

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗಾಗಿ ಪ್ರತಿಭಟನೆ

Click to Translate

ಬೆಂಗಳೂರು

ರಾಜ್ಯ ಸರ್ಕಾರಿ ನೌಕರರು ಹಾಗೂ ಅವಲಂಬಿತ ಕುಟುಂಬ ವರ್ಗದವರಿಗೆ ಸರ್ಕಾರ ಜಾರಿ ಮಾಡಿರುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ನಮಗೂ ಕೂಡ ಜಾರಿ ಮಾಡಿಕೊಡಿ‌ ಎಂದು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಸಿಬ್ಬಂದಿ, ಪೌರಕಾರ್ಮಿಕರು ಹಾಗೂ ಅಧಿಕಾರಿ ವೃಂದದವರು ಪ್ರತಿಭಟನೆ ನಡೆಸಿದ್ರು.

ಅವಳಿ ನಗರದಲ್ಲಿ ಧಾರವಾಡ ಹಾಗೂ ಹುಬ್ಬಳ್ಳಿ ಪಾಲಿಕೆ ಕಚೇರಿ ಮುಂದೆ ಧರಣಿ ನಡೆಸುತ್ತಿರುವ ಪೌರ ಕಾರ್ಮಿಕರು ಹಾಗೂ ಪಾಲಿಕೆ ಸಿಬ್ಬಂದಿಯವರು, ಕೋವಿಡ್ ಕಷ್ಟಕಾಲದಲ್ಲಿ ಕೆಲಸ ಮಾಡುತ್ತಿರುವ ನಮಗೆಲ್ಲಾ ಈ ಯೋಜನೆಯನ್ನ ಜಾರಿಮಾಡಿದ್ರೆ ಅನುಕೂಲವಾಗುತ್ತೆ ಎಂದು ಒತ್ತಾಯ ಮಾಡಿದ್ರು..

Related Articles

Leave a Reply

Your email address will not be published. Required fields are marked *

Back to top button