assemblyCITY CRIME NEWSDHARWADL&TLife StyleLokasabaMANGALURUPolicePolitical newsProtestVINAYKULKARNIರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಪತ್ನಿಯ ಕತ್ತು ಸೀಳಿ ಸೂಟ್ ಕೇಸ್ ತುಂಬಿದ: ಗಂಡ!

dakhani

power city news:bangalore/ಬೆಂಗಳೂರ/- ಕೈ ಹಿಡಿದ ಪತ್ನಿ ತನ್ನ ಕುಟುಂಬದವರ ಜೊತೆ ಹೊಂದಾಣಿಕೆ ಜೀವನ ನಡೆಸದೆ ಪದೆ ಪದೆ ಕಿರಿ ಕಿರಿ ಮಾಡುತ್ತಿದ್ದಳು ಎನ್ನುವ ಕಾರಣಕ್ಕೆ‌ ಟೆಕ್ಕಿ ರಾಕೇಶ್ ಸಿಟ್ಟಿನ ಕೈಗೆ ಬುದ್ದಿ ಕೊಟ್ಟಿದ್ದಾನೆ. ಆಗ ನಡೆಯ ಬಾರದ ಅನಾಹುತ ನಡದೆ ಹೋಗಿದೆ. ಪತ್ನಿ ಗೌರಿಯನ್ನು ಕೊಂದು ಶವವನ್ನು(murder) ಸೂಟ್‌ಕೇಸ್‌ಗೆ (sootcase)ತುಂಬಿ ಕಡೆಗೆ ತಾನೂ ಕೂಡ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಆಗ ಖಚಿತ ಮಾಹಿತಿ ಆಧರಸಿ ಘಟನಾ(place) ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು(police) ರಾಕೇಶನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಗಂಡ-ಹೆಂಡತಿ ಇಬ್ಬರು ಪುಣೆಯಲ್ಲಿ(pune) ಪೋಷಕರೊಂದಿಗೆ ವಾಸವಾಗಿದ್ದ ವೇಳೆಯಲ್ಲಿ ಪತ್ನಿ ಗೌರಿ ಜಗಳವಾಡಿಕೊಂಡು ಪತಿ ರಾಕೇಶನ(rakesh) ಪೋಷಕರಿಂದ ದೂರವಾಗಿ(bangalore) ಬೆಂಗಳೂರಿಗೆ ಕರೆದುಕೊಂಡು ಬಂದು ದೊಡ್ಡಕಮ್ಮನ (doddamman) ಹಳ್ಳಿಯಲ್ಲಿ ಟೆಕ್ಕಿ ದಂಪತಿ ಮನೆ ಮಾಡಿಕೊಂಡು ವಾಸವಾಗಿದ್ದರು.

ಆದರೆ ಇಲ್ಲಿಯೂ ಸಹ ಇಬ್ಬರ ನಡುವೆ ಹೊಂದಾಣಿಕೆ ನೆಮ್ಮದಿಯಿಂದ ಬದುಕಲು ಆಕೆ ಬಿಡುತ್ತಿಲ್ಲವೆಂದುಕೊಂಡು ಹತಾಶನಾಗಿದ್ದಾನೆ.ಅಲ್ಲದೆ ಮತ್ತೆ ಪುಣೆಗೆ(pune) ಹೋಗಿ ಬೇರೆ ಮನೆ ಮಾಡಿಕೊಂಡು ವಾಸಿಸೋಣ ಎಂದು ಪೀಡಿಸುತ್ತಿದ್ದಳು, ವಿನಾಃಕಾರಣ(unnecessory) ಜಗಳ ವಾಡುತ್ತಿದ್ದಳು.
ಪತ್ನಿಯ ಕಿರುಕುಳದಿಂದ ಬೇರೆ ದಾರಿ ಕಾಣದೆ ಮಾ.26 ರಂದು ಆಕೆಯನ್ನು ಕೊಲೆ(murder) ಮಾಡಿ ನಂತರ ಶವವನ್ನು(deadbody) ಸೂಟ್‌ಕೇಸ್‌ಗೆ ತುಂಬಿ ಮನೆ ಬಾಗಿಲು(door) ಹಾಕಿಕೊಂಡು ಹೋಗಿದ್ದು, ನಂತರ ಆತ್ಮಹತ್ಯೆ ಮಾಡಿಕೊಳ್ಳಲು ಫೆನಾಯಿಲ್ ಸೇವಿಸಿದ್ದು ನಂತರ ಆಸ್ಪತ್ರೆಯಲ್ಲಿ(hospital) ಚಿಕಿತ್ಸೆ ಪಡೆದಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆರೋಪಿ(accused) ರಾಕೇಶ್ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ.

Related Articles

Leave a Reply

Your email address will not be published. Required fields are marked *