ಸ್ಥಳೀಯ ಸುದ್ದಿ

ಕೆಡಿಪಿ ಸಭೆಯಿಂದ ಸಿಕ್ತು ಜಲಮಂಡಳಿ ಕಾರ್ಮಿಕರಿಗೆ ನ್ಯಾಯ

ಧಾರವಾಡ

ಮಾನ್ಯ ಗ್ರಾಮೀಣ ಶಾಸಕರಾದ ವಿನಯ ಕುಲಕರ್ಣಿ ಅವರು ಇತ್ತೀಚಿಗೆ ಕಿತ್ತೂರಿನಲ್ಲಿ ನಡೆಸಿದ ಮೊದಲ ಕೆಡಿಪಿ ಸಭೆಯಲ್ಲಿಯೇ ಜಲಮಂಡಳಿ ಕಾರ್ಮಿಕರ ಹಲವಾರು ದಿನಗಳ ಹೋರಾಟಕ್ಕೆ ನ್ಯಾಯ ಸಿಕ್ಕಂತೆ ಆಗಿದೆ.

ಮೊನ್ನೆ ಕಿತ್ತೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸನ್ಮಾನ್ಯ ಶಾಸಕ ವಿನಯ್ ಕುಲಕರ್ಣಿಯವರು ಹಳೆಯ ಜಲ ಮಂಡಳಿಯ ಕಾರ್ಮಿಕರನ್ನು L & T ಕಂಪನಿಯವರು ಕೈಬಿಟ್ಟಿದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಇದಾದ ಬಳಿಕ ಸರ್ಕಾರ ಕಾರ್ಮಿಕರ ಮರು ನೇಮಖಾತಿಗೆ ಆದೇಶ ಮಾಡಿದೆ.

ಇದರಿಂದ ಸಂತೋಷದಿಂದ ಕಾರ್ಮಿಕರು ವಿನಯ ಕುಲಕರ್ಣಿ ಅವರ ಮನೆಗೆ ಭೇಟಿ‌ ಕೊಟ್ಟು ಶಾಸಕರ ಪತ್ನಿ ಶಿವಲೀಲಾ ಕುಲಕರ್ಣಿ ಅವರಿಗೆ ಸಿಹಿ ತಿನಿಸಿ ಸಂಭ್ರಮಿಸಿದರು.

ಇದೇ ವೇಳೆ ಮಾತನಾಡಿದ ಜಲಮಂಡಳಿ ಕಾರ್ಮಿಕರು, ನಮಗೆ ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಜೀವನ ನಡೆಸಲು ತುಂಬಾ ತೊಂದರೆ ಆಗಿತ್ತು.

ನೀವು ನಮಗೆ ಅನ್ನಕ್ಕೆ ದಾರಿ ಮಾಡಿ ಕೊಟ್ಟಿದ್ದೀರಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಎಂದು ಸಂತೋಷ ಹಂಚಿಕೊಂಡರು.

Related Articles

Leave a Reply

Your email address will not be published. Required fields are marked *

Back to top button