ಸ್ಥಳೀಯ ಸುದ್ದಿ
ಕೇಂದ್ರ ಗೃಹ ಸಚಿವರಿಗೆ ಹುಬ್ಬಳ್ಳಿಯಲ್ಲಿ ಸನ್ಮಾನಿಸಿ ಗೌರವಿಸಿದ ಮೇಯರ್
![](https://www.powercity.news/wp-content/uploads/2023/02/IMG-20230223-WA0010.jpg)
ಧಾರವಾಡ
ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಹುಬ್ಬಳ್ಳಿಯ ಮೂಲಕ ತೆರಳುತ್ತಿರುವ ಕೇಂದ್ರ ಗೃಹಮಂತ್ರಿಗಳಾದ ಸನ್ಮಾನ್ಯ ಶ್ರೀ ಅಮಿತ್ ಷಾ ರವರನ್ನು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
![](https://powercity.news/wp-content/uploads/2023/02/IMG-20230223-WA0011.jpg)
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರು, ಅಮೀತ್ ಶಾ ಅವರಿಗೆ ಕೇಸರಿ ಶಾಲನ್ನು ಹೊದಿಸುವ ಮೂಲಕ ಅವಳಿನಗರಕ್ಕೆ ಆತ್ಮೀಯವಾಗಿ ಸ್ವಾಗತಿಸಿದರು.
![](https://powercity.news/wp-content/uploads/2023/02/IMG-20230223-WA0013.jpg)
ಇದೇ ಸಂದರ್ಭದಲ್ಲಿ ಸನ್ಮಾನ್ಯರಿಗೆ ಜೈನ ಮುನಿಗಳಾದ ಶ್ರೀ ಅಜಿತಶೇಖರ ಸುರಜಿ ರವರಿಂದ ರಚಿಸಲ್ಪಟ್ಟ ದಿ ಕರ್ವ್ ಎಂಬ ಪುಸ್ತಕವನ್ನು ನೆನಪಿನ ಕಾಣಿಕೆಯಾಗಿ ಕೊಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ ಹಾಗೂ ಇದ್ದರು.