ಧಾರವಾಡ

ಗಣರಾಜ್ಯೋತ್ಸವ ದಿನದಂದು ಜಿಲ್ಲಾಧಿಕಾರಿಗೆ ಅಭಿಮಾನಿಯ Special Gipt.

ಧಾರವಾಡ

ಧಾರವಾಡ ಜಿಲ್ಲಾಧಿಕಾರಿ‌ ನಿತೇಶ ಪಾಟೀಲ್ ಅವರಿಗೆ ಇಂದು ಗಣರಾಜ್ಯೋತ್ಸವದ ದಿನದಂದು ವಿಶೇಷ ಉಡುಗೊರೆ ಕೊಡಲಾಯಿತು.

ಗರಗ ಖಾದಿ‌ ಗ್ರಾಮೋದ್ಯೋಗದಲ್ಲಿ ತಯಾರಾದ ಚಿಕ್ಕದಾದ ತ್ರೀವರ್ಣ ಧ್ವಜ ಇದಾಗಿದೆ. ಇಂದು‌ ಬೆಳಿಗ್ಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರು, ಮಿನಿ ವಿಧಾನಸೌಧದ ಧ್ವಜಾರೋಹಣ ಕಾರ್ಯಕ್ರಮಕ್ಕೆ ಬಂದಾಗ ಗರಗ ಗ್ರಾಮದ ವಿರೇಶ ಎನ್ನುವರು ಡಿಸಿ ಅವರು ಧರಿಸಿದ್ದ ಸೂಟಿಗೆ ಚಿಕ್ಕದಾದ ಧ್ವಜವನ್ನು ಹಚ್ಚಿದ್ರು.

ಗರಗ ಗ್ರಾಮದ ತ್ರೀವರ್ಣ ಧ್ವಜವನ್ನು ಹಾಕಿ ಗಣರಾಜೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾದ ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಇವತ್ತಿನ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಎಲ್ಲರ ಗಮನ ಸೆಳೆದ್ರು.

ಕೊವಿಡ್ ನಿಯಮಗಳ ಪಾಲನೆಯೊಂದಿಗೆ 73 ನೇ ಗಣರಾಜ್ಯೋತ್ಸವ ಧಾರವಾಡ ಜಿಲ್ಲೆಯಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ನಡೆಯಿತು.

Related Articles

Leave a Reply

Your email address will not be published. Required fields are marked *

Back to top button