ಧಾರವಾಡ
ತವರಿಗೆ ಬಂದ ಆರ್ಮಿಯ ಪೈಲ್ವಾನ್ ಗೆ ಸಚಿವರಿಂದ ಆತ್ಮೀಯ ಸನ್ಮಾನ
![](https://www.powercity.news/wp-content/uploads/2021/11/IMG-20211118-WA0086.jpg)
ಧಾರವಾಡ
ಭಾರತೀಯ ಸೈನ್ಯದಲ್ಲಿ ಕುಸ್ತಿಯಿಂದಲೇ ಹೆಸರು ಮಾಡಿರುವ ಪೇಢಾ ನಗರಿ ಧಾರವಾಡ ಜಿಲ್ಲೆಯ ಪೈಲ್ವಾನ್ ರಫಿಕ ಹೊಳಿ ತವರು ಜಿಲ್ಲೆ ಧಾರವಾಡಕ್ಕೆ ಬಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಅವರು ಆತ್ಮೀಯ ಸನ್ಮಾನ ಮಾಡಿದ್ದಾರೆ.
![](http://powercity.news/wp-content/uploads/2021/11/IMG-20211118-WA0088.jpg)
ಮೊನ್ನೆಯಷ್ಟೆ ದೆಹಲಿಯಲ್ಲಿ ನಡೆದ ಇಂಟರ್ ಸರ್ವಿಸಸ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಬಂಗಾರದ ಪದಕ ಗೆದ್ದಿದ್ರು ರಫಿಕ ಹೋಳಿ.
![](http://powercity.news/wp-content/uploads/2021/11/IMG-20211118-WA0087.jpg)
ದೇಶದ ನಾನಾ ರಾಜ್ಯಗಳ ಪ್ರತಿಭಾವಂತ ಕುಸ್ತಿ ಪಟುಗಳು ಕ್ರೀಡೆಯಲ್ಲಿ ಪಾಲ್ಗೊಂಡಿದ್ದರು.
ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದಿದ್ದ ರಫಿಕ್ ಅವರು ತೀರಿ ಹೋಗಿರುವ ತಮ್ಮ ತಾಯಿಗೆ ಚಿನ್ನದ ಪದಕ ಅರ್ಪಣೆ ಮಾಡಿದ್ದರು.
![](http://powercity.news/wp-content/uploads/2021/11/IMG-20211118-WA0089.jpg)
ರಫಿಕ್ ಸದ್ಯ ಪೂನಾದಲ್ಲಿ ಸೇನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.