ಸ್ಥಳೀಯ ಸುದ್ದಿ
ಧಾರವಾಡದಲ್ಲಿ ಐಟಿ ಅಧಿಕಾರಿಗಳ ದಾಳಿ
![](https://www.powercity.news/wp-content/uploads/2023/05/IMG_20230504_190502.jpg)
ಧಾರವಾಡ
ಧಾರವಾಡದಲ್ಲಿ ಐಟಿ ಅಧಿಕಾರಿಗಳ ದಾಳಿ ನಡೆದಿದೆ.
![](https://powercity.news/wp-content/uploads/2023/05/IMG_20230504_185331.jpg)
ಮಾಜಿ ಸಚಿವ
ವಿನಯಕುಲಕರ್ಣಿ ಅವರ ಅಪ್ತ ಕಾರ್ಯದರ್ಶಿ ಪ್ರಶಾಂತ ಕೆಕರೆ ಅವರ ಮನೆಯಲ್ಲಿ ಐಟಿ ದಾಳಿ ನಡೆದಿದ್ದು, ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅವರ ಆಪ್ತ ಕಾರ್ಯದರ್ಶಿ ಯಾಗಿ ಪ್ರಶಾಂತ್ ಕೆಕರೆ ಅವರು ಹಲವಾರು ವರ್ಷಗಳಿಂದ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.
ಮನೆಯಿಂದ ಹೊರಗಡೆ ಹೋಗಿದ್ದ ಪ್ರಶಾಂತ ಕೆಕರೆ ಆಗಮನಕ್ಕೆ ಐಟಿ ಅಧಿಕಾರಿಗಳು ಕೆಲಹೊತ್ತು ಕಾಯ್ದರು.
![](https://powercity.news/wp-content/uploads/2023/05/IMG_20230504_185331-1.jpg)
ಕಳೆದ ಬಾರಿ ಚುನಾವಣೆಯಂತೆ ಈ ಬಾರಿಯೂ ಐಟಿ ರೇಡ್ ಆಗುತ್ತೆ ಎಂದು ಇತ್ತೀಚಿಗೆ 2 ದಿನಗಳ ಹಿಂದೆಯಷ್ಟೇ ಹೇಳಿಕೆ ಕೊಟ್ಟಿದ್ದರು ವಿನಯ ಕುಲಕರ್ಣಿ.
ಕಿತ್ತೂರಿನಲ್ಲಿ ಮೊನ್ನೆಯಷ್ಟೇ ಹೇಳಿಕೆ ಕೊಟ್ಟಿದ್ದ ಮಾಜಿ ಸಚಿವ ಕಂಪ್ಲೀಟ್ ಆಗಿ ಬಿಜೆಪಿಯವರು ಫೋನ್ ಟ್ಯಾಪಿಂಗ್ ಮಾಡ್ತಾ ಇದ್ದಾರೆ. ಈ ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು.