ಧಾರವಾಡದ ಜನಸ್ನೇಹಿ ತಹಶಿಲ್ದಾರ ವರ್ಗಾವಣೆ
![](https://www.powercity.news/wp-content/uploads/2022/06/Screenshot_2022-06-17-22-39-05-510_com.whatsapp.jpg)
ಧಾರವಾಡ
ಹೌದು ಧಾರವಾಡ ತಾಲೂಕಿಗೆ ಹೊಸ ತಹಶಿಲ್ದಾರ ಆಗಿ ಕೆಎಎಸ್ ಅಧಿಕಾರಿ ಸಂತೋಷ ಹಿರೇಮಠ ಅಧಿಕಾರ ಸ್ವೀಕಾರ ಮಾಡಿದ್ದು, ಜನಸ್ನೇಹಿ ತಾಲೂಕು ದಂಡಾಧಿಕಾರಿಯಾಗಿ ಕೆಲಸ ಮಾಡಿರುವ ಸಂತೋಷ ಬಿರಾದಾರ ಅವರ ವರ್ಗಾವಣೆ ಆಗಿದೆ.
![](http://powercity.news/wp-content/uploads/2022/06/IMG_20220617_224102-1.jpg)
ಸಂತೋಷ ಬಿರಾದಾರ ಅವರ ಕೆಲಸ ಎಂತಹದ್ದು ಎನ್ನುವುದನ್ನು ನೋಡಿದ್ರೆ ಮಾನವೀಯತೆಯುಳ್ಳ ಅಧಿಕಾರಿ ಎನ್ನುವ ಮಾತುಗಳು ಎಲ್ಲರಿಂದ ಕೇಳಿ ಬರುತ್ತಿವೆ.
![](http://powercity.news/wp-content/uploads/2022/06/IMG-20220617-WA0021.jpg)
ಕೊರೊನಾ ಸಂಕಷ್ಟದ ಸಮಯದಲ್ಲಿ ಹಲವಾರು ಮಂದಿಗೆ ಸಂಕಷ್ಟಕ್ಕೆ ಮಿಡಿದವರಿಗೆ ಸಹಾಯ ಮಾಡಿದ್ದರು ತಹಶಿಲ್ದಾರ ಸಂತೋಷ ಬಿರಾದಾರ.
![](http://powercity.news/wp-content/uploads/2022/06/Screenshot_2022-06-17-22-39-05-510_com.whatsapp-1.jpg)
ಅಷ್ಟೇ ಅಲ್ಲದೇ ಕೆಲಸದ ನಿಮಿತ್ತ ಧಾರವಾಡ ತಾಲೂಕಿನ ಅಮ್ಮಿನಭಾವಿಯಿಂದ ಧಾರವಾಡಕ್ಕೆ ಬರುವಾಗ ದಾರಿ ಮಧ್ಯೆ ಸವದತ್ತಿ ಮೂಲದ ವ್ಯಕ್ತಿಯ ಬೈಕ್ ಅಪಘಾತವಾದಾಗ ಸ್ವಂತ: ತಮ್ಮದೇ ಸರ್ಕಾರಿ ವಾಹನದಲ್ಲಿ ಕರೆದುಕೊಂಡು ಜಿಲ್ಲಾಸ್ಪತ್ರೆಗೆ ಬಂದು ಚಿಕೆತ್ಸೆ ಕೊಡಿಸಿದ್ದಾರೆ.
ಇಂತಹ ಅಧಿಕಾರಿ ಧಾರವಾಡ ತಾಲೂಕಿನಿಂದ ಬೇರೆಡೆಗೆ ವರ್ಗವಾಗಿ ಸಹಜವಾಗಿಯೇ ಅವರ ಸಿಬ್ಬಂದಿ ವರ್ಗ ಹಾಗೂ ಅತ್ಮೀಯ ಬಳಗದಲ್ಲಿ ಸ್ವಲ್ಪ ನೋವು ತಂದಿದೆ.
![](http://powercity.news/wp-content/uploads/2022/06/IMG_20220617_223952.jpg)
ಆದ್ರೆ ಸರ್ಕಾರದ ಆದೇಶದ ಮುಂದೆ ಏನು ಮಾಡಲಿಕ್ಕೆ ಆಗೋಲ್ಲಾ ಎನ್ನುವ ಪರಿಕಲ್ಪನೆಯು ಅಧಿಕಾರಿಗಳಲ್ಲಿದೆ.
ಹೀಗಾಗಿ ಹೊಸ ತಹಶಿಲ್ದಾರ ಅವರಿಗೆ ಸ್ವಾಗತ ಮಾಡಿ ಹಳೆಯ ತಹಶಿಲ್ದಾರರ ಅವರನ್ನು ಬಿಳ್ಕೋಡುವ ಕಾರ್ಯಕ್ರಮ ನಡೆಯಿತು.