ಧಾರವಾಡ

ಧಾರವಾಡದ ಯುವ ಕಾಂಗ್ರೆಸ್ ಮುಖಂಡ ಇಮ್ರಾನ್ ಕಳ್ಳಿಮನಿ ಮನೆಗೆ ಭೇಟಿ ನೀಡಿದ ಸಲೀಂ ಅಹ್ಮದ್ ……

ಧಾರವಾಡ

ಪರಿಷತ್ ಚುನಾವಣೆಗೆ ಪೈಪೋಟಿ ‌ನಡೆಸಿದ್ದ ಧಾರವಾಡ ಜಿಲ್ಲೆಯ‌ ಯುವ ಕಾಂಗ್ರೆಸ್ ಮುಖಂಡ ಹಾಗೂ KPCC

ಅಲ್ಪಸಂಖ್ಯಾತರ ರಾಜ್ಯ ವಿಭಾಗದ ಉಪಾಧ್ಯಕ್ಷ ಇಮ್ರಾನ್ ಕಳ್ಳಿಮನಿ ಅವರಿಗೆ ಭವಿಷ್ಯದಲ್ಲಿ ‌ಸೂಕ್ತ ಸ್ಥಾನಮಾನ ಸಿಗುವ ಭರವಸೆ ಇದೆ.

ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದ ಸಲೀಂ ಅಹ್ಮದ ಅವರು ಕಳ್ಳಿಮನಿ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ರು.

ಇಮ್ರಾನ್ ಕಳ್ಳಿಮನಿ ಅವರು ಸಲೀಂ ಅಹ್ಮದ್ ಅವರಿಗೆ ನೆನಪಿನ ಕಾಣಿಕೆ ಕೊಟ್ಟು ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಇಮ್ರಾನ್ ಅವರ ತಂದೆ ಹಿರಿಯ ಕಾಂಗ್ರೆಸ್ ‌ಮುಖಂಡ ಶಫಿ ಕಳ್ಳಿಮನಿ, ಶಾಸಕ ಪ್ರಸಾದ್ ಅಬ್ಬಯ್ಯ, ನಾಗರಾಜ ಗೌರಿ, ಹಾಗೂ ಇತರೆ ಕಾಂಗ್ರೆಸ್ ಮುಖಂಡರು ಇದ್ದರು.

Related Articles

Leave a Reply

Your email address will not be published. Required fields are marked *

Back to top button