ಸ್ಥಳೀಯ ಸುದ್ದಿ
ಧಾರವಾಡದ ವಿವಿಧ ವಾರ್ಡಗಳಲ್ಲಿ ಮೇಯರ್ ಸಭೆ
![](https://www.powercity.news/wp-content/uploads/2022/07/IMG-20220725-WA0004.jpg)
ಧಾರವಾಡ
ಇಂದು ಪಾಲಿಕೆಯ ಸದಸ್ಯರು ಹಾಗೂ ಸ್ಥಳೀಯ ನಾಗರಿಕರ ಮನವಿಯ ಮೇರೆಗೆ, ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರು, ಧಾರವಾಡದ ಆರೋಗ್ಯನಗರ ಹಾಗೂ ಮಾಕಡವಾಲೆ ಪ್ಲಾಟಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಸಾರ್ವಜನಿಕ ಸಭೆಯನ್ನು ಏರ್ಪಡಿಸಲಾಗಿತ್ತು.
![](http://powercity.news/wp-content/uploads/2022/07/IMG-20220725-WA0006.jpg)
![](http://powercity.news/wp-content/uploads/2022/07/IMG-20220725-WA0001.jpg)
ಪ್ರಾಥಮಿಕವಾಗಿ ಕುಡಿಯುವ ನೀರು ಹಾಗೂ ಬೀದಿ ದೀಪಗಳ ವ್ಯವಸ್ಥೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು. ಹಾಗೂ ಅಲ್ಲಿನ ನಾಗರಿಕರು ಸ್ವಚ್ಛತೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತಾಗಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದರ ಬಗ್ಗೆ ಭರವಸೆ ನೀಡಲಾಯಿತು. ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ಕವಿತಾ ಕಬ್ಬೆರ ರವರು, ವಲಯ ಅಧಿಕಾರಿಗಳಾದ ಮನೋಜ್ ಗಿರೀಶ, ಲಕ್ಷ್ಮಣ ಹೂಗಾರ ರವರು, ಸಾವಂತ ಡಂಬಳ ರವರು, ಶ್ರೀಧರ ಯಾದವಾಡ, ನಾಗರಾಜ, ಶ್ರೀ ರೆಡ್ಡಿ ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
![](http://powercity.news/wp-content/uploads/2022/07/IMG-20220725-WA0002.jpg)