ಧಾರವಾಡ
ಧಾರವಾಡ ಗುಲಗಂಜಿಕೊಪ್ಪದ ರುದ್ರಭೂಮಿಯ ವಿದ್ಯುತ್ ಚಿತಾಗಾರದ ಕಾಮಗಾರಿಗೆ ಚಾಲನೆ
![](https://www.powercity.news/wp-content/uploads/2021/12/IMG-20211218-WA0115.jpg)
ಧಾರವಾಡ
ಧಾರವಾಡ ಶಹರದರಲ್ಲಿ ಬರುವ ಗುಲಗಂಜಿಕೊಪ್ಪದ ರುದ್ರಭೂಮಿಯಲ್ಲಿ ಧಾರವಾಡ ಜನರ ಬಹು ದಿನಗಳ ಬೇಡಿಕೆ ಆಗಿದ್ದ ವಿದ್ಯುತ್ ಚಿತಾಗಾರ 46 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸುವ ಕಾಮಗಾರಿಗೆ ಇಂದು ಭೂಮಿ ಪೂಜೆ ನಡೆಸಲಾಯಿತು.
ಧಾರವಾಡ ಶಾಸಕರಾದ ಶ್ರೀ ಅಮೃತ ದೇಸಾಯಿ ಅವರು ಈ ಕಾಮಗಾರಿಗೆ ಚಾಲನೆ ನೀಡಿದರು.
![](http://powercity.news/wp-content/uploads/2021/12/IMG-20211218-WA0115-1.jpg)
ಈ ಸಂಧರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ , ಶ್ರೀ ಈರೇಶ ಅಂಚಟಗೇರಿ, ಶ್ರೀ ಮತಿ ಅನಿತಾ ಚಳಗೇರಿ,ಸುನೀಲ್ ಮೊರೆ, ಬಸವರಾಜ ಕೆಂಚನಳ್ಳಿ, ಪ್ರಮುಖರಾದ ಶ್ರೀ ಸಂತೋಷ್ ದೇವರೆಡ್ಡಿ, ಶ್ರೀ ಸಿ ಎಸ್ ಪಾಟೀಲ ಹಾಗೂ ಕಲ್ಮೇಶ್ವರ ದೇವಸ್ತಾನದ ಅದ್ಯಕ್ಷರು ಹಾಗೂ ಸರ್ವ ಸದಸ್ಯರು ಸೇರಿದಂತೆ ಆತ್ಮಾನಂದ ನಗರ, ಕುಮಾರೇಶ್ವರ ನಗರ, ಸೈದಾಪುರ, ಗುಲಗಂಜಿಕೊಪ್ಪದ ಎಲ್ಲಾ ಗುರು ಹಿರಿಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.