ಧಾರವಾಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಸನ್ಮಾನಿಸಿ ಗೌರವಿಸಿದ ಮೇಯರ್ ಅಂಚಟಗೇರಿ
![](https://www.powercity.news/wp-content/uploads/2023/05/IMG-20230508-WA0042.jpg)
ಧಾರವಾಡ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರು ಪ್ರತಿನಿಧಿಸುವ ವಾರ್ಡ ಕಮಲಾಪುರದಲ್ಲಿ ಬಡ ದಂಪತಿಗಳ ಮಗಳು ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾಳೆ.
![](https://powercity.news/wp-content/uploads/2023/05/IMG-20230508-WA0043.jpg)
ಕಮಲಾಪೂರದ ನಿವಾಸಿಗಳಾದ ಶಿವಲಿಂಗಪ್ಪ ಅಂಗಡಿ ರವರ, ಸುಪುತ್ರಿ ಕು. ಸಂಜನಾ ಶಿವಲಿಂಗಪ್ಪ ಅಂಗಡಿ ರವರು, ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 621 ಅಂಕಗಳನ್ನು ಗಳಿಸುವ ಮೂಲಕ ಧಾರವಾಡ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ಕರ್ನಾಟಕಕ್ಕೆ 5 ನೇ ಸ್ಥಾನವನ್ನು ಗಳಿಸಿ, ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತರುವಲ್ಲಿ ಯಶಸ್ವಿಯಾಗಿದ್ದಾಳೆ.
![](https://powercity.news/wp-content/uploads/2023/05/IMG-20230508-WA0044.jpg)
ವಿದ್ಯಾರ್ಥಿನಿ ತಂದೆ ಒಬ್ಬ ಸಾಮಾನ್ಯ ಬಡಕುಟುಂಬದಲ್ಲಿ ಇದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಾ ಮಕ್ಕಳಿಗೆ ವಿದ್ಯೆಯನ್ನು ಕೊಟ್ಟಿದ್ದಾರೆ.
![](https://powercity.news/wp-content/uploads/2023/05/IMG-20230508-WA0045.jpg)
ತಂದೆ-ತಾಯಿಯರ ಪರಿಶ್ರಮಕ್ಕೆ ಉತ್ತಮ ಫಲಿತಾಂಶ ಪಡೆಯುವುದರ ಮೂಲಕ ಕು. ಸಂಜನಾ ಅಂಗಡಿ ರವರು ತಕ್ಕ ಪ್ರತಿಫಲವನ್ನು ನೀಡಿದ್ದಾಳೆ.
ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ರವರು, ಅವರ ನಿವಾಸಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯನ್ನು ಆತ್ಮೀಯವಾಗಿ ಅಭಿನಂದಿಸಿ, ಸನ್ಮಾನಿಸಿದರು. ಅವಳ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಬೇಕಾಗುವ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬಸವರಾಜ ಬಾಳಗಿ ರವರು, ಮಲ್ಲೇಶ ಶಿಂಧೆ ರವರು, ಸೋಮನಗೌಡ ಪಾಟೀಲ, ರಾಜು ಕಮಾಟೆ ರವರು, ಮುರಗೇಶ ಹೊನ್ನಕೇರಿ ರವರು, ಸೇರಿದಂತೆ ಬಾಳಗಿ ಓಣಿಯ ಸಮಸ್ತ ಗುರುಹಿರಿಯರು ಉಪಸ್ಥಿತರಿದ್ದರು.