ಧಾರವಾಡ

ಪಾವರ ನ್ಯೂಸನ ಬಿಗ್ impact – ಹದಗೆಟ್ಟ ರಸ್ತೆಗೆ ಅಧಿಕಾರಿಗಳಿಂದ ಪ್ಯಾಚಪ್ ಕಾಮಗಾರಿ‌

ಧಾರವಾಡ

ಧಾರವಾಡದ ಹದಗೆಟ್ಟ ರಸ್ತೆ ಸಲುವಾಗಿ‌ ಡಿಸಿ ಕಚೇರಿ ಮುಂದೆ ಚಾಣಕ್ಯ ‌ಸೇನೆಯಿಂದ ನಡೆಯಲಿದೆ ಪ್ರತಿಭಟನೆ ಅಂತಾ ಪವರ್ ಸಿಟಿ ನ್ಯೂಸ ‌ನಲ್ಲಿ ವರದಿ ಬಿತ್ತರವಾಗಿತ್ತು.

ವರದಿ ವೈರಲ್ ಆಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತಕೊಂಡು ರಸ್ತೆಯ ರಿಪೇರಿ ಕಾಮಗಾರಿ ಶುರು ಮಾಡಿದ್ದಾರೆ‌. ಅದು ಕೂಡ ತೇಪೆ ಹಚ್ಚುವ ಕೆಲಸ ಇದಾಗಿದೆ.

ಧೂಳಿನಿಂದ ಕೂಡಿದ ತೆಗ್ಗು ಗುಂಡಿಗಳನ್ನು‌ ಮುಚ್ಚದೇ ಹೋದ್ರೆ ನಾಳೆಯಿಂದ ಡಿಸಿ‌ ಕಚೇರಿ ಎದುರು ಚಾಣಕ್ಯ‌ ಸೇನೆ ನೇತೃತ್ವದಲ್ಲಿ ‌ಪ್ರತಿಭಟನೆ ನಡೆಸಲು ಸಾರ್ವಜನಿಕರಿಗೆ ಕರೆ ಕೊಡಲಾಗಿತ್ತು.

ರಸ್ತೆ ಕಾಮಗಾರಿ‌ ಶುರುವಾಗಿದ್ದರಿಂದ ಪ್ರತಿಭಟನೆ ಕೈಬಿಡಲಾಗಿದೆ ಎಂದು‌ ಚಾಣಕ್ಯಸೇನೆ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಕುಲಕರ್ಣಿ ‌ತಿಳಿಸಿದ್ದಾರೆ.

ಅಂತೂ ಇಂತು ಪಾವರ್ ಸಿಟಿ ನ್ಯೂಸನ ಪವರಪುಲ್ ಫಂಚ್ ನ ಸುದ್ದಿಗೆ Big Impact ಸಿಕ್ಕಂತೆ ಆಗಿದೆ.

Related Articles

Leave a Reply

Your email address will not be published. Required fields are marked *

Back to top button