ಸ್ಥಳೀಯ ಸುದ್ದಿ
ಪುನೀತ್ ಅವರ ಕಂಚಿನ ಪುತ್ಥಳಿ ಅನಾವರಣ
![](https://www.powercity.news/wp-content/uploads/2022/06/IMG-20220605-WA0060-1.jpg)
ಹೊಸಪೇಟೆ
ಹೊಸ ಜಿಲ್ಲೆಯಾಗಿ ನಾಮಕರಣಗೊಂಡಿರುವ ಹೊಸಪೇಟೆಯಲ್ಲಿ ಅಪ್ಪು ಅವರ ಹವಾ ಜೋರಾಗಿಯೇ ಇದೆ.
ನಗರದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಶಾನಭಾಗ್ ಹೋಟೆಲ್ ಮುಂಭಾಗದಲ್ಲಿ ಅಪ್ಪು ಅವರ ಬೃಹದಾಕಾರದ ಕಂಚಿನ ಪುತ್ಥಳಿ ಅನಾವರಣ ಮಾಡಲಾಯಿತು.
![](http://powercity.news/wp-content/uploads/2022/06/IMG-20220605-WA0058.jpg)
ಪುನೀತ ಅವರ ಹಿರಿಯ ಸಹೋದರ ರಾಘವೇಂದ್ರ ರಾಜಕುಮಾರ ಅವರು ಕಂಚಿನ ಪುತ್ಥಳಿ ಅನಾವರಣ ಮಾಡಿದ್ರು.
ಈ ಕಾರ್ಯಕ್ರಮವನ್ನು ಅಪ್ಪು ಅಭಿಮಾನಿಗಳು ಕೈಗೊಂಡಿದ್ದರು.
ಹೊಸಪೇಟೆ ಮೂಲದ ಅಜಯ್ ರಾವ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸಚಿವರಾದ ಆನಂದ ಸಿಂಗ್ ಹಾಗೂ ಇತರೆ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಗಡಿನಾಡಿನ ಹೊಸಪೇಟೆ ಜಿಲ್ಲೆಯಲ್ಲಿ ಇನ್ನು ಮುಂದೆ ಪುನೀತ ಅವರ ಬೃಹತ್ ಕಂಚಿನ ಪುತ್ಥಳಿ ಎಲ್ಲರ ಗಮನ ಸೆಳೆಯುವುದು ಮಾತ್ರ ಸತ್ಯ..