ಪ್ರಧಾನಿ ಕಾರ್ಯಕ್ರಮಕ್ಕೆ ಸಿದ್ಧವಾಗಿದೆ ಧಾರವಾಡ ಜಿಲ್ಲೆ
![](https://www.powercity.news/wp-content/uploads/2023/03/IMG-20230307-WA0044.jpg)
ಧಾರವಾಡ
ಈ ಹಿಂದೆ 1994 ರಲ್ಲಿ ಪ್ರಧಾನಿ ಆಗಿದ್ದವರು ಧಾರವಾಡ ಜಿಲ್ಲೆಗೆ ಬಂದು ಹೋಗಿದ್ದರು. ಅದಾದ ಬಳಿಕ ಬೇರೆ ಯಾರೂ ಪ್ರಧಾನಿ ಆದವರು ಧಾರವಾಡ ಜಿಲ್ಲೆಗೆ ಬಂದಿರಲಿಲ್ಲಾ. ಈಗ ಮೋದಿ ಅವರು ಮಾರ್ಚ 12 ಕ್ಕೆ ಐಐಟಿ ಉದ್ಘಾಟನೆಗೆ ಬಂದು ಸುಮಾರು 5 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಚಾಲನೆ ಕೊಡುತ್ತಿರುವುದು ಧಾರವಾಡ ಜಿಲ್ಲೆಗೆ ಹೆಮ್ಮೆ ತಂದಿದೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಈಗಾಗಲೇ ಸ್ಥಳ ಪರಿಶೀಲನೆ ಮಾಡಿದ್ದು, ಸಚಿವರು ಶಾಸಕರೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿಸಲು ಶ್ರಮ ವಹಿಸುತ್ತಿದ್ದಾರೆ.
![](https://powercity.news/wp-content/uploads/2023/03/IMG-20230309-WA0027.jpg)
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮೋದಿ ಅವರು ಉದ್ಘಾಟನೆ ಮಾಡುವ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ಹೇಳಿದ್ದಾರೆ.
ಕಾರ್ಯಕ್ರಮಕ್ಕೆ ಒಟ್ಟು 2 ಲಕ್ಷ ಜನರು ಸೇರಲಿದ್ದು, ಮೇಯರ್ ಅಂಚಟಗೇರಿ, ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ, ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಹಾಲಪ್ಪಾ ಆಚಾರ, ಶಾಸಕ ನಿಂಬಣ್ಣವರ್, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ತವನ್ನಪ್ಪ ಅಷ್ಟಗಿ , ಮಾಜಿ ಶಾಸಕಿ ಸೀಮಾ ಮಸೂತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವಂತೆ ಮಹತ್ವದ ಜವಬ್ದಾರಿ ನಿಭಾಯಿಸುತ್ತಿದ್ದಾರೆ.
ಮೋದಿ ಅವರ ಆಗಮನಕ್ಕೆ ಧಾರವಾಡ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಯ ಜನರು ಕಾತರದಿಂದ ಕಾಯುತ್ತಿದ್ದಾರೆ.