ಸ್ಥಳೀಯ ಸುದ್ದಿ
ಪ್ರೀಯಾಂಕಾ ಗಾಂಧಿ ಅವರನ್ನು ಸ್ವಾಗತಿಸಿದ ರಾಜ್ಯದ ಕಾಂಗ್ರೆಸ ನಾಯಕರು
![](https://www.powercity.news/wp-content/uploads/2023/04/IMG-20230425-WA0061.jpg)
ಬೆಂಗಳೂರು
ಇಂದು ಬೆಂಗಳೂರಿಗೆ ಆಗಮಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾಂಗ್ರೆಸ್ ಪಕ್ಷದ ನಾಯಕಿ ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಸಲೀಂ ಅಹ್ಮದ್ ರವರು ಸ್ವಾಗತಿಸಿದರು.
![](https://powercity.news/wp-content/uploads/2023/04/IMG-20230425-WA0061-1.jpg)
![](https://powercity.news/wp-content/uploads/2023/04/IMG-20230425-WA0060.jpg)
ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೆ.ಸಿ ವೇಣುಗೋಪಾಲ್, ಶ್ರೀ ರಣದೀಪ್ ಸಿಂಗ್ ಸುರ್ಜೇವಾಲ , ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ ಶಿವಕುಮಾರ್,ವಿಧಾನ ಪರಿಷತ್ ಉಪ ನಾಯಕರಾದ ಶ್ರೀ ಗೋವಿಂದರಾಜು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ವಿಜಯ್ ಮುಳಗುಂದ್, ಉಪಾಧ್ಯಕ್ಷರಾದ ಶ್ರೀ ಸುಧೀಂದ್ರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.