ಸ್ಥಳೀಯ ಸುದ್ದಿ
ಭ್ರಷ್ಟ ಎಇಇ ಅವರ ಧಾರವಾಡದ ಮನೆ ಮೇಲೆ ಎಸಿಬಿ ರೇಡ್
![](https://www.powercity.news/wp-content/uploads/2022/03/IMG_20220317_111439.jpg)
ಧಾರವಾಡ
ಇಂದು ಬೆಳ್ಳಂಬೆಳ್ಳಿಗ್ಗೆ
ಭ್ರಷ್ಟ ಅಧಿಕಾರಿಯ ಮನೆ ಮೇಲೆ ಎಸಿಬಿ ರೇಡ್ ಮುಂದುವರೆದಿದೆ.
ಕರ್ನಾಟಕ ನೀರಾವರಿ ನಿಗಮ ನಿಯಮಿತ ಇಲಾಕೆ ಎಇಇ ಮನೆ ಮೇಲೆ ಎಸಿಬಿ ದಾಳಿ ಮುಂದುವರಿದಿದ್ದು, ಯಾದಗಿರಿ ಜಿಲ್ಲೆಯ ಎಸಿಬಿ ಅಧಿಕಾರಿಗಳು ಈ ರೇಡ್ ಮಾಡಿದ್ದಾರೆ.
![](http://powercity.news/wp-content/uploads/2022/03/IMG-20220317-WA0000.jpg)
ನಿನ್ನೆಯಷ್ಟೇ ಕಲ್ಬುರ್ಗಿ ಹಾಗೂ ಬೆಂಗಳೂರಿನ ಮನೆ ಮೇಲೆ ರೇಡ್ ಮಾಡಿದ್ದ ಎಸಿಬಿ ಅಧಿಕಾರಿಗಳು.
ಧಾರವಾಡದ ಸನ್ಮತಿನಗರದಲ್ಲಿರುವ ಮನೆ
ಬಸವರಾಜ ಪಾಟೀಲ್ ಎನ್ನುವ ಎಇಇ ಮನೆ ಮೇಲೆ ಈ ರೇಡ್ ನಡೆದಿದೆ.
ಗೋಕಾಕ ತಾಲೂಕಿನ ಕೌಜಲಗಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿ ಇವರಾಗಿದ್ದಾರೆ.
ಯಾದಗಿರಿ ಎಸಿಬಿ ಡಿವೈಎಸ್ಪಿ ಉಮಾಶಂಕರ ನೇತೃತ್ವದಲ್ಲಿ ಈ ರೇಡ್ ನಡೆದಿದ್ದು, ಕೆಲವು
ಮಹತ್ವದ ದಾಖಲಾತಿಗಳ ಪರಿಶೀಲನೆ ನಡೆಸಲಾಗುತ್ತಿದೆ.