ಸ್ಥಳೀಯ ಸುದ್ದಿ
ಮಾರುಕಟ್ಟೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ
![](https://www.powercity.news/wp-content/uploads/2022/09/IMG-20220928-WA0065.jpg)
ಧಾರವಾಡ
ಧಾರವಾಡದ ಮಹಾನಗರ ಪಾಲಿಕೆ ಕಚೇರಿಯಿಂದ 400 ಮೀಟರ್ ದೂರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.
ಈ ಬಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಮಾತ್ರ ಖ್ಯಾರೆ ಎನ್ನದೇ ನಮಗೆ ವಿಷಯ ಗೊತ್ತೆ ಇಲ್ಲಾ ಎನ್ನುವಂತೆ ಸುಮ್ಮನಾಗಿದ್ದಾರೆ.
![](https://powercity.news/wp-content/uploads/2022/09/IMG-20220928-WA0064.jpg)
ಧಾರವಾಡದ ಸುಭಾಸ ರಸ್ತೆ ಮುಂದೆ ಇರುವ ಮಾರ್ಕೇಟ್ ಏರಿಯಾದಲ್ಲಿ ಕುಡಿಯುವ ನೀರಿಗಾಗಿ ನೀರಿನ ಟ್ಯಾಂಕ್ ರೀತಿಯಲ್ಲಿ ಸುಂದರವಾದ ಕಲಾಕೃತಿಯನ್ನು ಮಾಡಿದ್ದು, ಇದು ಈಗ ಇದ್ದು ಇಲ್ಲದಂತೆ ಆಗಿದೆ. ಇಲ್ಲಿ ವ್ಯಾಪಾರ ಮಾಡಿಕೊಂಡು ಇರುವ ಜನರಿಗೆ ನೀರಿಗಾಗಿ ತೊಂದ್ರೆ ಅನುಭವಿಸುವಂತೆ ಆಗಿದೆ.
![](https://powercity.news/wp-content/uploads/2022/09/IMG-20220928-WA0066.jpg)
ಧಾರವಾಡದ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ವಹಿಸಿರುವ ಮೇಯರ್ ಈರೇಶ ಅಂಚಟಗೇರಿ ಅವರು ಈ ಕುಡಿಯುವ ನೀರಿನ ಸಮಸ್ಯೆಯನ್ನು ಅಧಿಕಾರಿಗಳ ಮುಖಾಂತರ ಯಾವ ರೀತಿ ಬಗೆಹರಿಸುತ್ತಾರೆ ಎನ್ನುವುದನ್ನು ನೋಡಬೇಕಿದೆ.
ಪವರ್ ಸಿಟಿ ನ್ಯೂಸ್ ಕನ್ನಡ
ಸತ್ಯ ಸದಾಕಾಲ