ಬೆಂಗಳೂರು

ಮೇಕೆದಾಟು ಯೋಜನೆ ಹೋರಾಟದಲ್ಲಿ ಪೇಢಾ ನಗರಿಯ ಕೈ ನಾಯಕರು ಭಾಗಿ

ಬೆಂಗಳೂರು

ಮೇಕೆದಾಟು ಯೋಜನೆ ಪಾದಯಾತ್ರೆಯಲ್ಲಿ ಧಾರವಾಡ ಜಿಲ್ಲೆಯ ‌ನಾಯಕರು ಭಾಗಿಯಾಗಿದ್ದಾರೆ.

ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಪಾದಯಾತ್ರೆ ಉದ್ದಕೂ ಸಿದ್ದರಾಮಯ್ಯಾ ಜೋತೆಗೆ ಇರುವ ವಿನಯ‌ ಕುಲಕರ್ಣಿ ಅವರು ಮೇಕೆ‌ ದಾಟು‌ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡುತ್ತಲೆ ಮುನ್ನುಗುತ್ತಿದ್ದಾರೆ.

ಗುರಿ ಒಂದೇ- ಮೇಕೆದಾಟು ಯೋಜನೆ ಎನ್ನುವ ಮೂಲಕ ಮಾಜಿ ಸಚಿವರು ಡಿಕೆ ಶಿವಕುಮಾರ ಹಾಗೂ ಸಿದ್ದರಾಮಯ್ಯಾ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಇವರ ಜೋತೆಗೆ ಇತ್ತೀಚಿಗೆ ಕಾಂಗ್ರೆಸ್ ಸೇರಿರುವ ಮಾಜಿ‌ ಶಾಸಕ ಎನ್.ಎಚ್.ಕೋನರೆಡ್ಡಿ ಅವರು ಕೂಡ ಭಾಗಿಯಾಗಿದ್ದಾರೆ.

ಕಾಂಗ್ರೆಸ್ ನಾಯಕರು ಶತಾಯಗಥಾಯ ಪಾದಯಾತ್ರೆ ಯಶಸ್ವಿಗೊಳಿಸಲು ನಿರ್ಧರಿಸಿದ್ದು, ಧಾರವಾಡ ಜಿಲ್ಲೆಯ ಕಾಂಗ್ರೆಸ್ ನಾಯಕರು ಮೇಕೆದಾಟು ಯೋಜನೆಯ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button