ಸ್ಥಳೀಯ ಸುದ್ದಿ
ಮೇಯರ್ ವಾರ್ಡನಲ್ಲಿ 1 ಕೋಟಿ 36 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ
![](https://www.powercity.news/wp-content/uploads/2022/09/IMG-20220903-WA0026.jpg)
ಧಾರವಾಡ
ಧಾರವಾಡದ ವಾರ್ಡ್ ನಂಬರ್ 3 ರಲ್ಲಿ ಬರುವಂತಹ ಅಂದಾಜು 1 ಕೋಟಿ 36 ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ಮರಾಠ ಕಾಲೋನಿ ಮುಖ್ಯ ರಸ್ತೆಯಿಂದ, ಶಿವಾಲಯ ಮಾರ್ಗವಾಗಿ, ಸಬ್ ಜೈಲ್ ವರೆಗಿನ ರಸ್ತೆ ಕಾಮಗಾರಿಯ ಭೂಮಿಪೂಜೆಯನ್ನು, ಶಿವಾಲಯ ಹಿಂಭಾಗದ ಹೈ ಮಾಸ್ಟ್ ವಿದ್ಯುತ್ ಕಂಬದ ಉದ್ಘಾಟನೆ ಕಾರ್ಯಕ್ರಮವನ್ನು ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ಸಚಿವರಾದ ಸನ್ಮಾನ್ಯ ಪ್ರಹ್ಲಾದ ಜೋಷಿ ರವರು ನೆರವೇರಿಸಿದರು.
![](https://powercity.news/wp-content/uploads/2022/09/IMG-20220903-WA0025.jpg)
ಈ ಕಾರ್ಯಕ್ರಮದಲ್ಲಿ ಶಾಸಕರು ಅಮೃತ ದೇಸಾಯಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ಸುರೇಶ ಬೆದರೆ ರವರು, ನಿತಿನ್ ಇಂಡಿ
ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ತವನಪ್ಪ ಅಷ್ಟಗಿ ರವರು, ಸುನೀಲ ಮೊರೆ ರವರು, ಶ್ರೀನಿವಾಸ್ ಕೋಟ್ಯಾನ್ ರವರು, ಬಸು ಬಾಳಗಿ ರವರು, ಈರಯ್ಯ ರಾಚಯ್ಯನವರ ರವರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.