ಧಾರವಾಡ
ರಾಜ್ಯದಲ್ಲಿ 3 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ
![](https://www.powercity.news/wp-content/uploads/2021/11/IMG-20211118-WA0046.jpg)
ಧಾರವಾಡ
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಶನರೇಟ್ ವಿಭಾಗದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರಾಮಾನುಜನ್ ಅವರನ್ನು ಬೆಂಗಳೂರಿಗೆ ವರ್ಗ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ.
ಅವರ ಜಾಗಕ್ಕೆ ಸಾಹಿಲ್ ಬಗ್ಲಾ ಅವರನ್ನು ನೇಮಕ ಮಾಡಿದೆ.
ಸಾಹಿಲ್ ಬಗ್ಲಾ ಅವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಉಪವಿಭಾಗದ ಎಎಸ್ಪಿಯಾಗಿ ಕೆಲಸ ಮಾಡುತ್ತಿದ್ದರು.
![](http://powercity.news/wp-content/uploads/2021/11/IMG-20211118-WA0046-1.jpg)
ಅವರನ್ನು ನೇರವಾಗಿ ಬೆಂಗಳೂರು ಸಿಐಡಿ ಎಎಸ್ಪಿಯಾಗಿ ನೇಮಕ ಮಾಡಿ ಹೆಚ್ಚವರಿ ಹೊಣೆಯನ್ನು ಧಾರವಾಡದ ಪೊಲೀಸ್ ಕಮೀಶನರೇಟ್ ವಿಭಾಗಕ್ಕೆ ಡಿಸಿಪಿಯಾಗಿ ( law & order) ಅಧಿಕಾರ ವಹಿಸಲಾಗಿದೆ.
ಈಗಾಗಲೇ IPS ತರಬೇತಿ ಪೂರ್ಣಗೊಳಿಸಿದ ಜಿತೇಂದ್ರಕುಮಾರ್ ದ್ಯಾಮಾ ಅವರನ್ನು ಭದ್ರಾವತಿ ಉಪವಿಭಾಗದ ಎಎಸ್ಪಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.