ರೈತರ ದನಕರುಗಳನ್ನು ಖದಿಯುತ್ತಿದ್ದ ಖದೀಮರ ಬಂಧನ
![](https://www.powercity.news/wp-content/uploads/2022/03/IMG_20220303_231344.jpg)
ಧಾರವಾಡ
ದನಗಳನ್ನು ಕಳ್ಳತನ ಮಾಡುತ್ತಿದ್ದ ಐವರು ಆರೋಪಿಗಳನ್ನು ಗರಗ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
![](http://powercity.news/wp-content/uploads/2022/03/IMG_20220303_231404.jpg)
ಧಾರವಾಡ
ತಾಲೂಕಿನ ಗರಗ ಗ್ರಾಮದ ಮಡಿವಾಳಪ್ಪ ನಿಂಗಪ್ಪ ಮಲ್ಲೇದಿ, ಮಕ್ತುಂಸಾಬ ಹುಸೇನಸಾಬ ಶೇಖ, ನಿಂಗಪ್ಪ ಮಡಿವಾಳಪ್ಪ ವಾಲೀಕಾರ, ಮಹಾಂತೇಶ ನಿಂಗಪ್ಪ ಹಡಗಲಿ ಮತ್ತು ಧಾರವಾಡದ ರಮಜಾನಸಾಬ ಶರೀಫಸಾಬ ಬೇಪಾರಿ ಎಂಬುವರೇ ಬಂಧಿತ ಆರೋಪಿಗಳು.
![](http://powercity.news/wp-content/uploads/2022/03/IMG_20220303_230941.jpg)
ಇವರಿಂದ 2 ಲಕ್ಷ 60 ಸಾವಿರ ರೂಪಾಯಿ ನಗದು ಮತ್ತು ದನಗಳ ಕಳ್ಳತನಕ್ಕೆ ಬಳಸುತ್ತಿದ್ದ _2 ಲಕ್ಷ ಮೌಲ್ಯದ 1ಗೂಡ್ಸ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
![](http://powercity.news/wp-content/uploads/2022/03/IMG_20220303_230928.jpg)
![](http://powercity.news/wp-content/uploads/2022/03/IMG_20220303_230855.jpg)
ಸಿಪಿಐ ಎಸ್.ಸಿ.ಪಾಟೀಲ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಕಿರಣ ಮೋಹಿತೆ, ಎಎಸ್ಐ ಸಾತಪುತೆ, ಎಚ್.ಎಂ.ನರಗುಂದ, ಎಸ್.ಎಫ್.ತಿಮ್ಮಾಪುರ, ವೈ.ಜಿ.ಶಿವಮ್ಮನವರ, ಸಂತೋಷ್ ಜವಳಿ, ಎ.ಬಿ.ಸೊರಟೂರ, ಎಸ್.ಎಫ್.ಕಟ್ಟಿಮನಿ, ಮಂಜು ಕೆರೂರ ಅವರನ್ನೊಳಗೊಂಡ ತಂಡ ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
![](http://powercity.news/wp-content/uploads/2022/03/IMG_20220303_230911.jpg)
ಇತ್ತೀಚಿನ ದಿನಗಳಲ್ಲಿ ತಾಲೂಕಿನ ವಿವಿಧೆಡೆ ಎತ್ತು, ಎಮ್ಮೆ ಮತ್ತು ಹಸುಗಳನ್ನು ಕಳ್ಳತನ ಮಾಡುವ ಕೃತ್ಯಗಳು ನಡೆಯುತ್ತಿದ್ದವು.
![](http://powercity.news/wp-content/uploads/2022/03/IMG_20220303_230832.jpg)
ಈ ಸಂಬಂಧ ರೈತರು ತೀವ್ರ ಆತಂಕಕ್ಕೊಳಗಾಗಿದ್ದರು.
ಇದೀಗ ಕೆಲವು ಆರೋಪಿಗಳು ಬಲೆಗೆ ಬಿದ್ದಿದ್ದು, ಇನ್ನುಳಿದವರನ್ನು ಸಹ ಕಂಬಿಯ ಹಿಂದೆ ಕಳಿಸುವ ಕೆಲಸವನ್ನು ಪೊಲೀಸರು ಮಾಡಬೇಕಿದೆ.