ಸ್ಥಳೀಯ ಸುದ್ದಿ
ವಿನಯಗೆ ಡಿಸಿಎಂ ಸ್ಥಾನಕ್ಕಾಗಿ ಸವದತ್ತಿ ರೇಣುಕಾ ಯಲ್ಲಮ್ಮತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿ
![](https://www.powercity.news/wp-content/uploads/2023/05/IMG-20230515-WA0070.jpg)
ಧಾರವಾಡ
ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರಿಗೆ ಡಿಸಿಎಂ ಹುದ್ದೆ ಸಿಗಲೆಂದು ಹೆಬ್ಬಳ್ಳಿ ಗ್ರಾಮದ ಅವರ ಅಭಿಮಾನಿಯೊಬ್ಬರು ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮನ ಸನ್ನಿಧಿಯಲ್ಲಿ ಕುಟುಂಬ ಸಮೇತ ಪ್ರಾರ್ಥನೆ ಸಲ್ಲಿಸಿದ್ರು.
![](https://powercity.news/wp-content/uploads/2023/05/IMG-20230517-WA0029.jpg)
ಹೆಬ್ಬಳ್ಳಿ ಗ್ರಾಮದ ವಾಸಂಬಿ ಮಂಜುನಾಥ ಅವರು ಕುಟುಂಬ ಸಮೇತ ಪೂಜೆ ಸಲ್ಲಿಸಿ, ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ವಿನಯ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟರೆ ಎಲ್ಲಾ ವರ್ಗದ ಎಲ್ಲಾಸಮಾಜದ ಜನರ ಅಭಿವೃದ್ಧಿ ಹಾಗೂ ಆಶೋತ್ತರಗಳು ಈಡೇರುವ ಭರವಸೆ ಇದೆ ಎಂದರು.