ಸ್ಥಳೀಯ ಸುದ್ದಿ
ವ್ಯವಹಾರಿಕ ಕಾರಣಕ್ಕೆ ಚಾಕು ಇರಿತ
![](https://www.powercity.news/wp-content/uploads/2022/07/IMG_20220702_163428.jpg)
ಧಾರವಾಡ
ಧಾರವಾಡದಲ್ಲಿ ವ್ಯವಹಾರಿಕ ಕಾರಣಕ್ಕಾಗಿ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ.
ನಗರದ ಪ್ರತಿಷ್ಠಿತ ಮನೆತನದ ವ್ಯಕ್ತಿಯಾಗಿರುವ ನಿಜಾಮುದ್ದೀನ್ ಶೇಖ ಎನ್ನುವರು ಹಣಕಾಸಿನ ವ್ಯವಹಾರದ ವಿಷಯವಾಗಿ
ಸೈಯದ ಜಾಫರ ಶೇಖ ಸನದಿ (40) ಎಂಬಾತನ ಮೇಲೆ ಕೋಲೆ ಯತ್ನ ಮಾಡಿದ್ದಾರೆ.
![](http://powercity.news/wp-content/uploads/2022/07/IMG_20220702_163521.jpg)
ಧಾರವಾಡದ ಎತ್ತಿನಗುಡ್ಡ ರಸ್ತೆಯಲ್ಲಿರುವ ಹಾಶ್ಮೀನಗರದಲ್ಲಿ ಈ ಘಟನೆ ಇಂದು ಬೆಳ್ಳಿಗ್ಗೆ ನಡೆದಿದ್ದು, ಗಾಯಾಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆ ಸಂಬಂಧ ಆರೋಪಿ ಉಪನಗರ ಪೊಲೀಸ್ ಠಾಣೆಗೆ ಶರಣಾಗಿದ್ದು, ಠಾಣೆಯಲ್ಲಿ ಕೊಲೆಯತ್ನದ ಕೇಸ್ ದಾಖಲಾಗಿದೆ.