ಸ್ಥಳೀಯ ಸುದ್ದಿ
ಶಾಸಕರ ಅರ್ಥಪೂರ್ಣ ಬರ್ತಡೆಗೆ ಸಜ್ಜಾಗುತ್ತಿದೆ ಧಾರವಾಡ ಜಿಲ್ಲೆ
![](https://www.powercity.news/wp-content/uploads/2022/11/IMG_20221114_153852-scaled.jpg)
ಧಾರವಾಡ
ಧಾರವಾಡದ ಜನಪ್ರಿಯ ಶಾಸಕರಾದ ಅಮೃತ ದೇಸಾಯಿಯವರ 45ನೇ ಜನ್ಮ ದಿನದ ಅಂಗವಾಗಿ ಇದೇ ದಿನಾಂಕ 16 ರಂದು ಅಮೃತ ಆರೋಗ್ಯ ಸೇವೆ ಎಂಬ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಆಯೋಜಿಸಲಾಗಿದೆ.
![](https://powercity.news/wp-content/uploads/2022/11/IMG_20221114_153845-scaled.jpg)
ಶಾಸಕರು ಹಾಗೂ ಜನಸೇವಕರಾದ ಅಮೃತ ದೇಸಾಯಿಯವರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಈ ಬೃಹತ್ ಆರೋಗ್ಯ ಶಿಬಿರ ಆಯೋಜಿಸಲಾಗಿದೆ ಎಂದು ಅಮೃತ ದೇಸಾಯಿ ಅಭಿಮಾನಿ ಬಳಗದವರು ಸುದ್ದಿಗೋಷ್ಠಿ ನಡೆಸಿದ ಮಾಹಿತಿ ನೀಡಿದ್ರು.
![](https://powercity.news/wp-content/uploads/2022/11/IMG_20221114_153841-scaled.jpg)
ಆರೋಗ್ಯ ಶಿಬಿರದಲ್ಲಿ 60 ಕ್ಕೂ ಹೆಚ್ಚು ತಜ್ಞ ವೈದ್ಯರು ಭಾಗವಹಿಸಲಿದ್ದಾರೆ.
ಕ್ಷೇತ್ರದ ಎಲ್ಲ ಬಡ ಜನರಿಗೆ ಹಾಗೂ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಅನುಕೂಲ ಕಲ್ಪಿಸಲು ಈ ಶಿಬಿರ ನಡೆಸಲಾಗುತ್ತಿದೆ.
60ಕ್ಕೂ ಹೆಚ್ಚು ವೈದ್ಯರು ವಿವಿಧ ಕಾಯಿಲೆಗಳಿಗೆ ಉತ್ತಮ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ರು.