ಶೀಘ್ರದಲ್ಲೇ ಟಾಟಾ ಮಾರ್ಕೊ ಪೋಲೊ ಕಾರ್ಮಿಕರ ಸಮಸ್ಯೆ ಇತ್ಯರ್ಥ
![](https://www.powercity.news/wp-content/uploads/2022/04/IMG_20220407_134455-scaled.jpg)
ಧಾರವಾಡ
ಕಳೆದ 15 ದಿನಗಳಿಂದ ಡಿಸಿ ಕಚೇರಿ ಎದುರು ಟಾಟಾ ಮಾರ್ಕೊ ಪೋಲೊ ಕಾರ್ಮಿಕರು ಹೋರಾಟ ನಡೆಸುತ್ತಿದ್ದು, ಕಾರ್ಮಿಕರ ಸಮಸ್ಯೆ ಆಲಿಸಲು ಶಾಸಕ ಅರವಿಂದ ಬೆಲ್ಲದ ಆಗಮಿಸಿದ್ದರು.
![](http://powercity.news/wp-content/uploads/2022/04/IMG_20220407_134455-1-scaled.jpg)
ಕಾರ್ಮಿಕರ ಸಮಸ್ಯೆ ಬಹಳಷ್ಟಿದ್ದು, ಈಗಾಗಲೇ ಕಂಪನಿಯವರ ಜೋತೆಗೆ ಮಾತನಾಡಿರುವೆ. ಸಮಸ್ಯೆಯನ್ನು ಬಗೆಹರಿಸಲು ಇಬ್ಬರ ನಡುವೆ ಸಂಧಾನ ಸಭೆ ನಡೆಸಲಾಗುವುದು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ರು.
![](http://powercity.news/wp-content/uploads/2022/04/IMG_20220407_134455-2-scaled.jpg)
ಇದೇ ಸಂದರ್ಭದಲ್ಲಿ ಕಾರ್ಮಿಕರು ಕಂಪನಿ ನಡೆಸಿಕೊಳ್ಳುತ್ತಿರುವ ಕುರಿತು ಶಾಸಕರಿಗೆ ಸವಿವರವಾಗಿ ತಿಳಿಸಿಕೊಟ್ಟರು.
ಹಿಜಾಬ್ ವಿಚಾರವಾಗಿ ಮುಸ್ಕಾನ್ ಎನ್ನುವ ವಿದ್ಯಾರ್ಥಿನಿಗೆ ಉಗ್ರರು ಅಭಿನಂದನೆ ಸಲ್ಲಿಸಿದ್ದ ವಿಚಾರದ ಬಗ್ಗೆ ಮಾತನಾಡಿದ ಶಾಸಕ ಅರವಿಂದ ಬೆಲ್ಲದ , ಮುಸ್ಕಾನ ತಂದೆ ಖಂಡಿಸಿದ್ದ ರೀತಿಯಲ್ಲಿ
ಎಲ್ಲರೂ ಖಂಡಿಸಬೇಕು ಎಂದರು.
ದೇಶದ ಶಕ್ತಿಗಳು ಈ ವಿಚಾರದಲ್ಲಿ ಪ್ರಚೋದನೆ ಕೊಡುತ್ತಿವೆ. ದೇಶದಲ್ಲಿ ಎಲ್ಲಾ ಜಾತೀಯ ಹಾಗೂ ಧರ್ಮದ ಜನರಿದ್ದಾರೆ. ಕೆಲವು ಮುಸ್ಲಿಂ ನಾಯಕರು ತಮಗೆ ತಿಳಿದ ಹಾಗೆ ಹೇಳಿಕೆ ಕೊಡುತ್ತಿದ್ದಾರೆ ಇದು ಸರಿಯಲ್ಲಾ ಎಂದರು. ಈಬಗ್ಗೆಸಿದ್ದರಾಮಯ್ಯ ಬಾಲಿಶತನದ ಹೇಳಿಕೆ ಕೊಡುತ್ತಿದ್ದಾರೆ ಎಂದರು.