ಸಮಸ್ಯೆಗೆ ತುರ್ತಾಗಿ ಸ್ಪಂದಿಸಿ ಜನಸ್ನೇಹಿ ಜಿಲ್ಲಾಧಿಕಾರಿಯಾದ ಧಾರಾವಾಡ ಡಿಸಿ ನಿತೇಶ ಪಾಟೀಲ್
![](https://www.powercity.news/wp-content/uploads/2021/11/IMG_20211122_213509.jpg)
ಧಾರವಾಡ
ಪವರ್ ಸಿಟಿ ನ್ಯೂಸ್ ಕನ್ನಡದಲ್ಲಿ ಮನಸೂರಿನಲ್ಲಿ ಬೀದಿಗೆ ಬಿದ್ದ ರೈತನ ಕುಟುಂಬ ಎಂದು ಕೆಲವೇ ಗಂಟೆಗಳ ಹಿಂದೆಯಷ್ಟೇ ಸುದ್ದಿ ಪ್ರಸಾರ ಮಾಡಲಾಗಿತ್ತು.
![](http://powercity.news/wp-content/uploads/2021/11/IMG_20211122_213509-1.jpg)
![](http://powercity.news/wp-content/uploads/2021/11/IMG_20211122_185433-1.jpg)
ಮನಸೂರು ಗ್ರಾಮದ ಕರೆಪ್ಪ ಅರಳಿಕಟ್ಟಿ ಕುಟುಂಬ ಅಕಾಲಿಕ ಮಳೆಗೆ ಬೆಳೆ ಹಾನಿ ಹಾಗೂ ಮನೆ ಬಿದ್ದು ಬೀದಿಯಲ್ಲಿ ಜೀವನ ನಡೆಸುವಂತಹ ಸ್ಥಿತಿ ಆಗಿತ್ತು.
ಈ ಸುದ್ದಿಯನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರ ಗಮನಕ್ಕೂ ತರಲಾಗಿತ್ತು.
![](http://powercity.news/wp-content/uploads/2021/11/IMG_20211122_213019.jpg)
ತಕ್ಷಣ ಮನಸೂರಿನ (va) ತಲಾಟಿ ಅಲ್ಲಾಭಕ್ಷ ಪಿಂಜಾರ್ ನಿಗೆ ಮಾಹಿತಿ ಕೇಳಿದ ಜಿಲ್ಲಾಧಿಕಾರಿಗಳು ಏನು ಆಗಿದೆ ಪರಿಸ್ಥಿತಿ ಮತ್ತು ನಿವೇನು ಕ್ರಮ ಕೈಗೊಂಡಿದ್ರಿ ಎಂದು ಕೇಳಿದ್ರು.
ಈ ವಿಷಯವಾಗಿ ಜಿಲ್ಲಾಧಿಕಾರಿಗೆ ತಿಳಿಸಿರುವ ತಲಾಟಿ ನವೆಂಬರ್ 17 ಕ್ಕೆ ಮನೆ ಬಿದ್ದಿದೆ. 18 ಕ್ಕೆ ಭೇಟಿ ಕೊಟ್ಟು ಮೇಲಾಧಿಕರಿಗಳಿಗೆ ವರದಿ ಕೊಡಲಾಗಿದೆ ಎಂದರು.
![](http://powercity.news/wp-content/uploads/2021/11/IMG_20211122_213447.jpg)
ಈ ಬಗ್ಗೆ ಜಿಲ್ಲಾಧಿಕಾರಿಗಳು ಪವರ್ ಸಿಟಿ ನ್ಯೂಸ್ ಕನ್ನಡಕ್ಕೆ ಮಾಹಿತಿ ಕೊಟ್ಟಿದ್ದು, ನವೆಂಬರ್ 30 ರೊಳಗೆ ಮನೆ ಬಿದ್ದು, ಬೆಳೆ ಹಾನಿಯಾಗಿ ಕಂಗಾಲಾಗಿರುವ ಕುಟುಂಬಕ್ಕೆ ಪರಿಹಾರ ಕೊಡಲಾಗುವುದು ಎಂದಿದ್ದಾರೆ.
![](http://powercity.news/wp-content/uploads/2021/11/IMG-20211122-WA0120.jpg)
ಜನಸ್ನೇಹಿ ಜಿಲ್ಲಾಧಿಕಾರಿ ಆಗಿ ಸಮಸ್ಯೆಗೆ ಸ್ಪಂದಿಸಿದಕ್ಕೆ ನೊಂದಿರುವ ಬಡ ಕುಟುಂಬದ ಹಾರೈಕೆಗಳು ಸದಾಕಾಲ ಜಿಲ್ಲಾಧಿಕಾರಿ ಜೋತೆಗೆ ಇದ್ದೆ ಇರುತ್ತೆ.