ಸ್ಥಳೀಯ ಸುದ್ದಿ
ಸಮಸ್ಯೆಗೆ ಸ್ಪಂದಿಸದ ಕಾರ್ಪೊರೇಟರ್ ವಿರುದ್ಧ ಆಕ್ರೋಶ
![](https://www.powercity.news/wp-content/uploads/2022/12/IMG-20221228-WA0017.jpg)
ಧಾರವಾಡ
ಸ್ಮಾರ್ಟ ಸಿಟಿ ಅಂತಾ ಹೆಸರು ಮಾಡಿರುವ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಇನ್ನು ತಕ್ಕ ಮಟ್ಟಿಗೆ ಅಭಿವೃದ್ಧಿ ಎನ್ನೊದು ಮರಿಚಿಗೆ ಆಗಿದೆ.
![](https://powercity.news/wp-content/uploads/2022/12/IMG-20221228-WA0023.jpg)
ಇದಕ್ಕೆ ತಾಜಾ ಉದಾಹರಣೆ ಎಂದ್ರೆ ಧಾರವಾಡದ ವಾರ್ಡ ನಂಬರ್ 12 . ವಿನಾಯಕನಗರದ 4 ನೇ ಕ್ರಾಸನಲ್ಲಿ ನಿತ್ಯವೂ ಡ್ರೈನೇಜ್ ಸಮಸ್ಯೆಯಿಂದ ಜನರು ಮೂಗು ಮುಚ್ಚಿಕೊಂಡು ತಿರುಗಾಡುವಂತೆ ಆಗಿದೆ.
ಇಲ್ಲಿನ ಪಾಲಿಕೆ ಸದಸ್ಯ ವಿಜಯಾನಂದ ಶೆಟ್ಟಿ ಅವರು ಮಾತ್ರ ಇಷ್ಟೆಲ್ಲಾ ಸಮಸ್ಯೆಗಳು ಇದ್ದರೂ ಕೂಡ ತಮ್ಮ ಗಮನಕ್ಕೆ ಯಾವುದೇ ವಿಷಯ ಬಂದಿಲ್ಲಾ ಎನ್ನುವಂತೆ ಸುಮ್ಮನಾಗಿದ್ದಾರೆ.
![](https://powercity.news/wp-content/uploads/2022/12/IMG-20221228-WA0021.jpg)
ವಾರ್ಡ ಅಭಿವೃದ್ಧಿ ಜೋತೆಗೆ ಜನರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು ಅಭಿವೃದ್ಧಿ ವಾತಾವರಣ ಸೃಷ್ಟಿಸಿ ಎನ್ನುವ ಮೇಯರ್ ಮಾತಿಗೆ ಇಲ್ಲಿ ಬೆಲೆ ಇಲ್ಲದಂತಾಗಿದೆ.
ಈ ಬಗ್ಗೆ ವಿನಾಯಕನಗರದ ನಿವಾಸಿಗಳು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
![](https://powercity.news/wp-content/uploads/2022/12/IMG-20221228-WA0014.jpg)
ಈಗಲಾದ್ರೂ ಮೇಯರ್ ಈರೇಶ ಅಂಚಟಗೇರಿ ಅವರು ಈ ಸಮಸ್ಯೆಯನ್ನು ಬಗೆಹರಿಸಿಕೊಡ್ತಾರೆ ನೋಡಬೇಕಿದೆ.