ಸ್ಥಳೀಯ ಸುದ್ದಿ
ಸರ್ಕಾರಿ ನೌಕರರು ಕರ್ತವ್ಯದ ಅವಧಿಯಲ್ಲಿ ಗೈರಾದ್ರೆ ಶಿಸ್ತು ಕ್ರಮ
![](https://www.powercity.news/wp-content/uploads/2022/07/IMG_20220726_092715.jpg)
ಬೆಂಗಳೂರು
ಸರ್ಕಾರಿ ನೌಕರರು ತಮ್ಮ ಕಚೇರಿ ಅವಧಿಯಲ್ಲಿ ಇನ್ನು ಮುಂದೆ ಕಡ್ಡಾಯವಾಗಿ ಬೆಳ್ಳಿಗ್ಗೆ 10 ಕ್ಕೆ ಹಾಜರಿರಬೇಕೆಂದು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಆದೇಶ ಹೊರಡಿಸಿದ್ದಾರೆ.
![](http://powercity.news/wp-content/uploads/2022/07/IMG-20220726-WA0003-1.jpg)
ಈ ಹಿಂದೆ ಸರ್ಕಾರ ಇಂತಹ ಆದೇಶವನ್ನು ಹಲವಾರು ಬಾರಿ ಹೊರಡಿಸಿದ್ದರೂ ಕೂಡ ಅದು ಕಟ್ಟುನಿಟ್ಟಾಗಿ ಜಾರಿಯಾಗಿಲ್ಲಾ.
![](http://powercity.news/wp-content/uploads/2022/07/IMG_20220726_092715-1.jpg)
ಹೀಗಾಗಿ ವಿಷಯವನ್ನು ಗಂಭೀರವಾಗಿ ಪರಿಗಣನೆ ಮಾಡಿರುವ ಸಿಎಸ್. ಸರ್ಕಾರಿ ನೌಕರರ
ಸಮಯ ಪ್ರಜ್ಞೆ ಹಾಗೂ ಕಾರ್ಯನಿಷ್ಠೆಯ ಕೊರತೆ ಎದ್ದು ಕಾಣುತ್ತಿರುವ ಹಿನ್ನೆಲೆಯಲ್ಲಿ ಇಂತಹದೊಂದು ಆದೇಶವನ್ನು ಹೊರಡಿಸಿದ್ದಾರೆ.
ಒಂದು ವೇಳೆ ನೌಕರರು ತಮ್ನ ವೈಯಕ್ತಿಕ ಕೆಲಸದ ನಿಮಿತ್ತ ಹೊರಗಡೆ ಹೋಗುವ ಹಾಗಿದ್ದರೆ, ಹಿರಿಯ ಅಧಿಕಾರಿಗಳ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.