ಸ್ಥಳೀಯ ಸುದ್ದಿ

ಆಸ್ತಿ ವಿವಾದ ಮುಂಬೈ ಮೂಲದ ವ್ಯಕ್ತಿಯಿಂದ ಗಾಳಿಯಲ್ಲಿ ಗುಂಡು

ಧಾರವಾಡ

ಧಾರವಾಡದ ಟೈವಾಕ ಬಳಿ ಇರುವ ಖುಲ್ಲಾ ಜಾಗೆ ವಿವಾದಕ್ಕೆ ಸಂಬಂಧಿಸಿದಂತೆ, ಸುಶಾಂಕ ಎನ್ನುವ ಮುಂಬೈ ಮೂಲದ ವ್ಯಕ್ತಿ ಲೈಸನ್ಸ ಇರುವ ರಿವಾಲ್ವಾರನಿಂದ ಗಾಳಿಯಲ್ಲಿ ಒಂದು ಸುತ್ತು ‌ಗುಂಡು ಹಾರಿಸಿದ್ದಾನೆ.

ದೇಶಪಾಂಡೆ ಅವರ ಒಡೆತನದ ಖುಲ್ಲಾ ಜಾಗೆಯನ್ನು ಧಾರವಾಡ ನಿವಾಸಿ ಪವನ ಕುಲಕರ್ಣಿ 2014-15. ರಲ್ಲಿ ಖರಿದಿಸಿದ್ದರು. ಈ ಬಗ್ಗೆ ದಾಖಲಾತಿ ಕೂಡ ಇವೆ.

ಇದರ ಪಕ್ಕದ ಜಾಗ ಸುಶಾಂಕ ಅಗರವಾಲ ಅವರಿಗೆ ಸೇರಿದ್ದು, ಸ್ವತಃ ಜಾಗ ಅತಿಕ್ರಮಣವಾಗುತ್ತಿದೆ ಎನ್ನುವ ಗೊಂದಲದಲ್ಲಿ ಏಕಾಏಕಿ ಬಂದು ಪವ‌ನ ಕುಲಕರ್ಣಿ ಅವರಿಗೆ ಹೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ.

ಪೊಲೀಸರಿಗೆ ಪವನ ಕುಲಕರ್ಣಿ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ವಿದ್ಯಾಗಿರಿ ಸಿಪಿಐ ಸಂಗಮೇಶ ದಿಡಗನಾಳ ಭೇಟಿ ನೀಡಿ, ಇಬ್ಬರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ಮಾಡುತ್ತಿದ್ದಾರೆ. ‌

ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಸ್ಥಳಕ್ಕೆ ಆಗಮಿಸಿ, ತನಿಖೆಯನ್ನು ‌ಮುಂದುವರೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button