ಆರೋಗ್ಯಹುಬ್ಬಳ್ಳಿ

ಇನ್ನರ್ ವೀಲ್ ಕ್ಲಬ್ ಮತ್ತು ಹರ್ಟ್ ಫುಲ್ ನೆಸ್ ಸಂಸ್ಥೆ ಸಹಯೋಗದಲ್ಲಿ ಸಾರಿಗೆ ನೌಕರರಿಗೆ ಕಾರ್ಯಾಗಾರ

ಹುಬ್ಬಳ್ಳಿ

ಇಂದಿನ ಧಾವಂತದ ಬದುಕಿನಲ್ಲಿ ಎಲ್ಲರಲ್ಲೂ ಒತ್ತಡ ಹೆಚ್ಚಾಗುತ್ತಿದೆ. ಮನಸ್ಸನ್ನು ಪುನಶ್ಚೇತನಗೊಳಿಸಿ ವೈಯಕ್ತಿಕ ಹಾಗೂ ವೃತ್ತಿ ಜೀವನದ ಕಾರ್ಯಕ್ಷಮತೆ ಹೆಚ್ಚಿಸಲು ವ್ಯಕ್ತಿತ್ವ ವಿಕಸನ ಕಾರ್ಯಾಗಾರಗಳು ಸಹಕಾರಿಯಾಗುತ್ತವೆ ಎಂದು ವಾಕರಸಾ ಸಂಸ್ಥೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ಅಭಿಪ್ರಾಯಪಟ್ಟಿದ್ದಾರೆ.

ಗೋಕುಲ ರಸ್ತೆಯಲ್ಲಿರುವ ವಾಕರಸಾ ಸಂಸ್ಥೆಯ ಕ್ರೀಡಾ ಮತ್ತು ಸಾಂಸ್ಕೃತಿಕ ಭವನದಲ್ಲಿ
ಇನ್ನರ್ ವೀಲ್ ಕ್ಲಬ್ ಪಶ್ಚಿಮ ಶಾಖೆ ಹಾಗೂ ಹಾರ್ಟ್ ಫುಲ್ ನೆಸ್ ಸಂಸ್ಥೆಯ ಸಹಯೋಗದಲ್ಲಿ ಸಾರಿಗೆ ಸಿಬ್ಬಂದಿಗಳಿಗೆ ನ.11ರಿಂದ13 ವರೆಗೆ ಆಯೋಜಿಸಿದ್ದ ಒತ್ತಡ ನಿರ್ವಹಣೆ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಆಧುನಿಕ ಜೀವನ ಶೈಲಿ, ಆಹಾರ ಪದ್ಧತಿಯಿಂದಾಗಿ ಎಲ್ಲರೂ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಒಳಗಾಗಿದ್ದೇವೆ. ಕೋವಿಡ್ ನಂತರದಲ್ಲಿ ಇದಕ್ಕೆ ಆರ್ಥಿಕ ಒತ್ತಡವೂ ಸೇರಿಕೊಂಡಿದೆ. ವ್ಯಕ್ತಿತ್ವ ವಿಕಸನ ಕಾರ್ಯಾಗಾರಗಳಿಂದ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಕಾರ್ಯಕ್ಷಮತೆ ವೃದ್ಧಿಸುತ್ತದೆ. ಇದರಿಂದ ಸಂಸ್ಥೆಯ ಉತ್ಪಾದಕತೆ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು.

ಇನ್ನರ ವೀಲ್ ಕ್ಲಬ್ ಪಶ್ಚಿಮ ಶಾಖೆ ಹಲವಾರು
ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವುದು ಅಭಿನಂದನೀಯ. ಇದೀಗ ಸಾರಿಗೆ ಸಂಸ್ಥೆಯ ಪ್ರಯಾಣಿಕ ಸ್ನೇಹಿ ಹಾಗೂ ನೌಕರರ ಕ್ಷೇಮಾಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಇನ್ಸ್ಟಿಟ್ಯೂಟ್ ಆಫ್ ಹಾರ್ಟ್ ಫುಲ್ ನೆಸ್ ಸಂಸ್ಥೆಯ ಸಿಸ್ಟರ್ ಸುಜಾತಾ ನವಲೆ ಮನಸ್ಸಿನ ಸ್ಥಿರೀಕರಣ, ಏಕಾಗ್ರತೆ, ಆಂತರಿಕ ಶುದ್ದೀಕರಣ, ಮನೋ ಪುನಶ್ಚೇತನ ಹಾಗೂ ಧ್ಯಾನ ಕುರಿತು ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು.

ಶಿಬಿರಾರ್ಥಿ ಶಾಮಲಾ ಮತನಾಡಿ ಈ ತರಬೇತಿ ಕಾರ್ಯಾಗಾರದಿಂದ ಮನಸ್ಸಿನ ಏಕಾಗ್ರತೆ ಹೆಚ್ಚಾಗಿರುವುದು ಅನುಭವಕ್ಕೆ ಬಂದಿದೆ ಎಂದರು. ಸಿಬ್ಬಂದಿ ಅಧೀಕ್ಷಕ ಈರಣ್ಣ ಕಡ್ಲಿಮಟ್ಟಿ ಮಾತನಾಡಿ ತರಬೇತಿಯಿಂದ ದುಗುಡ ಕಡಿಮೆಯಾಗಿದೆ. ಸಂತೃಪ್ತ ನಿದ್ರೆಯಾಗಿ ಬೆಳಿಗ್ಗೆ ಬೇಗನೆ ಉತ್ಸಾಹದಿಂದ ಎಚ್ಚರವಾಗುತ್ತಿದೆ.ಇದನ್ನು ನಿತ್ಯವೂ ರೂಢಿಸಿಕೊಳ್ಳುವ ಸಂಕಲ್ಪ ಮಾಡಿದ್ದೇನೆ ಎಂದರು.ಡಿಪೋ ಮ್ಯಾನೇಜರ್ ಬಸಪ್ಪ ಪೂಜಾರಿ ಮಾತನಾಡಿ ಕಾರ್ಯಾಗಾರ ಮನಸ್ಸನ್ನು ಪ್ರಪುಲ್ಲಗೊಳಿಸಿದ ಅನನ್ಯ ಅನುಭವ ನೀಡಿತು ಎಂದು ಹೇಳಿದರು. ಡಿಪೋ ಮ್ಯಾನೇಜರ್ ವೈ.ಎಂ.ಶಿವರೆಡ್ಡಿ ಮಾತನಾಡಿ ಕಾರ್ಯಾಗಾರದಲ್ಲಿ ನಿದ್ರಾಹೀನತೆಗೆ ಪರಿಹಾರ ಸಿಕ್ಕಿದೆ ಎಂದರು.
ಹಲವಾರು ಚಾಲಕರು,ನಿರ್ವಾಹಕರ ಇಂತಹ ಮತ್ತಷ್ಟು ಕಾರ್ಯಾಗಾರಗಳನ್ನು ಆಯೋಜಿಸಲು ವಿನಂತಿಸಿದರು.

ಸಿಸ್ಟರ್ ಸುಜಾತ ನವಲೆ ಮತನಾಡಿ ನಮ್ಮ ಮನಸ್ಸು ಮೊಬೈಲ್ ಫೋನ್ ನ ಮೆಮೊರಿ ಇದ್ದಂತೆ.ನಾವು ಏನನ್ನು ಯೋಚಿಸುತ್ತೇವೋ ಅದನ್ನೇ ಶೇಖರಿಸಿಟ್ಟುಕೊಳ್ಳುತ್ತದೆ. ಬೇಕಿಲ್ಲದ ವಿಚಾರಗಳನ್ನೇ ತುಂಬಿ ಕೊಂಡರೆ ಒಳ್ಳೆಯ ವಿಚಾರಗಳಿಗೆ ಜಾಗವಿಲ್ಲದೆ ಒತ್ತಡಕ್ಕೆ ಕಾರಣವಾಗುತ್ತದೆ.ಇದು ಹಲವಾರು ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ನಿಯಮಿತವಾಗಿ ಮೆಡಿಟೇಷನ್ ಮೂಲಕ ಮನಸ್ಸಿನ ಮೆಮೊರಿಯನ್ನು ಸ್ವಚ್ಚಗೊಳಿಸಿದಾಗ ಪುನಶ್ಚೇತನಗೊಳ್ಳುತ್ತದೆ. ಮತ್ತೆ ಮೊದಲಿನಂತೆ ಕ್ರೀಯಾಶೀಲಗೊಳ್ಳುತ್ತದೆ.ಈ ನಿ‌ಟ್ಟಿನಲ್ಲಿ ತಮ್ಮ ಸಂಸ್ಥೆಯಿಂದ ಉಚಿತವಾಗಿ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ.ಆಸಕ್ತರು ಹೆಚ್ಚಿನ ಮಾಹಿತಿಗೆ ಡಾ.ಬಿ.ಆರ್.ಬಾರಕೋಲ ರನ್ನು ಮೊ.ಸಂ.9880082625 ಅಥವ ಅಜಿತ ಕಾಮತ ರನ್ನು ಮೊ.ಸಂ.9448489478 ರಲ್ಲಿ ಸಂಪರ್ಕಿಸಬಹುದು ಎಂದು ಹೇಳಿದರು.

ಇನ್ನರ ವೀಲ್ ಕ್ಲಬ್ ಹುಬ್ಬಳ್ಳಿ ಪಶ್ಚಿಮ ಶಾಖೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಗದ್ವಾಲ ಮಾತನಾಡಿ ಪ್ರಯಾಣಿಕ ಸ್ನೇಹಿ ಮತ್ತು ಸಾರಿಗೆ ನೌಕರರ ಕ್ಷೇಮಾಭಿವೃದ್ಧಿಗೆ ಸಂಬಂಧಿಸಿದಂತೆ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.ಅದರ ಭಾಗವಾಗಿ ಈ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ಗೋಕುಲ ರಸ್ತೆಯಲ್ಲಿ
ಪ್ರಯಾಣಿಕರ ತಂಗುದಾಣ ನಿರ್ಮಾಣ ಪ್ರಗತಿಯಲ್ಲಿದೆ.ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ 120 ನೌಕರರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಇನ್ನರ ವೀಲ್ ಕ್ಲಬ್ ಹುಬ್ಬಳ್ಳಿ ಪಶ್ಚಿಮ ಶಾಖೆಯ ಕಾರ್ಯದರ್ಶಿ ಪೂರ್ಣಿಮ ಕದಂಬಿ, ಶ್ರೀರಾಮಚಂದ್ರ ಮಿಶನ್ ನ ಹಿರಿಯ ತರಬೇತುದಾರ ರಮೇಶ ಪಟೇಲ್,ಸಿಸ್ಟರ್ ಸುನಿತಾ ಲಿಂಬಿಕಾಯಿ, ವಿಭಾಗೀಯ ಸಂಚಾರ ಅಧಿಕಾರಿ ಎಸ್.ಎಸ್. ಮುಜುಂದಾರ,ವಿಭಾಗೀಯ ತಾಂತ್ರಿಕ ಶಿಲ್ಪಿ ಪ್ರವೀಣ ಈಡೂರ, ಅಧಿಕಾರಿಗಳಾದ ನಾಗಮಣಿ,ರೋಹಿಣಿ ಶಂಕರ ಆಲಮೇಲ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button