ಸ್ಥಳೀಯ ಸುದ್ದಿ

ಕೋಳಿಕೇರಿ ಅಭಿವೃದ್ಧಿಗೆ 4 ಕೋಟಿ ಮಂಜೂರು, ಸುಪರ ಮಾರ್ಕೇಟ ಅಂಗಡಿ ಮಾಲೀಕರಿಗೆ ಸಕಾರಾತ್ಮಕ ಸ್ಪಂದನೆ- ಗ್ರಾಮೀಣ ಕ್ಷೇತ್ರದಲ್ಲಿ ನುಡಿದಂತೆ ನಡೆಯುತ್ತಿರುವ ಶಾಸಕ‌ ವಿನಯ ಕುಲಕರ್ಣಿ

ಧಾರವಾಡ

ಚುನಾವಣೆ ಸಂದರ್ಭದಲ್ಲಿ ಜನರ ಬೇಡಿಕೆ ತಕ್ಕಂತೆ ಕೆಲಸ ಮಾಡಿಸಿಕೊಡುವಲ್ಲಿ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಮುಂದಾಗಿದ್ದು, ಕ್ಷೇತ್ರದಿಂದ ಹೊರಗಿದ್ದರೂ ಕೂಡ ಜನರ ಸಮಸ್ಯೆಗಳಿಗೆ ಸ್ಪಂದನೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ.

ಬಹುದಿನದ ಬೆಡಿಕೆಯಾದ ಕೋಳಿಕೇರಿ ಸಮಗ್ರ ಅಭಿವೃಧ್ಧಿ ಗಾಗಿ ಹೊಸ ಯಲ್ಲಾಪೂರ ಹಾಗೂ ಸುತ್ತಮುತ್ತಲಿನ ಜನರು ಮಾನ್ಯ ಶಾಸಕರಾದ ವಿನಯ ಕುಲಕರ್ಣಿಯವರಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ,ರಾಜ್ಯ ಸರಕಾರದಿಂದ 4 ಕೋಟಿ ರೂ ಅನುದಾನ ಮಂಜೂರಾತಿಯನ್ನು ಶಾಸಕರು ಮಾಡಿಸಿದ್ದಾರೆ.‌

ಈ ಹಿನ್ನೆಲೆಯಲ್ಲಿ ಮಾನ್ಯ ಶಾಸಕರಾದ ಶ್ರೀ ವಿನಯ ಕುಲಕರ್ಣಿಯವರ ಆದೇಶದ ಮೇರೆಗೆ,ಇಂದು ಮಹಾನಗರ ಪಾಲಿಕೆಯ ಆಯುಕ್ತರಾದ ಉಳ್ಳಾಗಡ್ಡಿಯವರು ಹಾಗೂ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿಯವರು ಕೋಳಿಕೆರಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ್ರು.‌
ಆದ್ಯತೆಯ ಮೇರೆಗೆ ಶೀಘ್ರವಾಗಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ ಅವರು ಹೇಳಿದ್ರು.

ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು.

ಇದೇ ರೀತಿಯಾಗಿ ಸುಪರ್ ಮಾರ್ಕೇಟ ಅಂಗಡಿಗಳ ವಸ್ತುಸ್ಥಿತಿ ಪರಿಶೀಲಿಸಿದ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ ಅವರು, ಮಾಲೀಕರು ಪುನಃ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡಲಿಕ್ಕೆ ಅವಕಾಶ ಕೇಳಿದ್ದರಿಂದ ಗ್ರಾಮೀಣ ಶಾಸಕರು ಸರ್ಕಾರದ ಮಟ್ಟದಲ್ಲಿ ಮಾತನಾಡಿಸಿ, ಸಮಸ್ಯೆಯನ್ನು ವಾಪ್ಯಾರಿಗಳಿಗೆ ಬಗೆಹರಿಸಿಕೊಟ್ಟು, ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.‌

ಈ ಸಂಧರ್ಭದಲ್ಲಿ ಮಾಜಿ‌ಮಹಾನಗರ ಪಾಲಿಕೆ ಸದಸ್ಯರಾದ ಪ್ರಕಾಶ ಘಾಟಗೆ,ಸಂಜೀವ ಲಕಮನಹಳ್ಳಿ,ಆನಂದ ಸಿಂಗನಾಥ,ಬಸವರಾಜ ನೇಮನ್ನವರ ಸೇರಿದಂತೆ ಹೊಸ ಯಲ್ಲಾಪೂರ ಹಾಗೂ ಸುತ್ತ ಮುತ್ತಲಿನ ಹಿರಿಯರು,ರೈತಬಾಂಧವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button