ಧಾರವಾಡ

ಛತ್ರಪತಿ ಶಿವಾಜಿ ಮಹಾರಾಜ- ಸಂಗೋಳ್ಳಿ ರಾಯಣ್ಣಗೆ ಅವಮಾನ – ಮರಾಠಾ ಸಮಾಜದಿಂದ ಖಂಡನೆ- ಆಕ್ರೋಶ

ಧಾರವಾಡ

ಬೆಂಗಳೂರಿನಲ್ಲಿ ಮೊನ್ನೆ ಛತ್ರಪತಿ ಶಿವಾಜಿ ಮಹಾರಾಜರಿಗೆ, ಬೆಳಗಾವಿ ಜಿಲ್ಲೆಯಲ್ಲಿ ನಿನ್ನೆ ಸಂಗೊಳ್ಳಿ ರಾಯಣ್ಣನರ ಮೂರ್ತಿಗೆ ಅಪಮಾನ ಮಾಡಿದ ಕಿಡಿಗೇಡಿಗಳನ್ನ ಕೂಡಲೇ ಬಂಧಿಸಬೇಕು ಹಾಗೂ
ರಾಷ್ಟ್ರದ್ರೋಹದ ಅಡಿ ಕೇಸ ದಾಖಲಿಸಬೇಕು ಎಂದು ಧಾರವಾಡ ಜಿಲ್ಲೆಯಲ್ಲಿ ಪ್ರತಿಭಟನೆಗಳು ನಡೆದವು.

ಮರಾಠಾ ಸಮಾಜದ ಹಿರಿಯರು ಇಂದು ಧಾರವಾಡ ಜಿಲ್ಲಾಧಿಕಾರಿ‌ ಕಚೇರಿ‌ ಹಾಗೂ ಶಿವಾಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ರು.‌

ರಾಜ್ಯದಲ್ಲಿ
ನಿಮಗ ಸರಕಾರ ನಡೆಸಾಕ ಆಗಲಿಲ್ಲ ಅಂದ್ರೆ ರಾಜೀನಾಮೆ ಕೊಟ್ಟು ಮನ್ಯಾಗ ಕುಂಡ್ರಿ, ಇಂತಹ ಹೇಯ ಕೃತ್ಯ ಮಾಡುತ್ತಿರುವ ಬಾಬರ್ ಸಂತತಿಯ ತಳಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ.
ರಾಷ್ಟ್ರಪುರುಷರ ಅಪಮಾನವನ್ನು ಸಹಿಸಲಾಗದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ Basavaraj P Jadhav: M N ಮೊರೆ ಸುಭಾಸ ಶಿಂದೆ ಬಸವರಾಜ ಜಾಧವ ಶಂಕರ ಶೇಳಕೆ ಬಿಮಪ್ಪಾ ಕಸಾಯಿ ಕಿರಣ ಜಾಧವ ರಾಜು ಬಿರ್ಜೆನ್ನವರ ವಿಠ್ಠಲ ಚೌವ್ಹಾಣ್ ನಾರಾಯಣ ಹುಬಳಿ ಭಿಮರಾವ್ ಮಾನೆ, ಸಂತೋಷ ಬಿರ್ಜನ್ನವರ್, ಶಿವಾಜಿ ತಡಕೋಡ, ವಿಜಯ ಕಾಳೆ, ಹಾಜರಿದ್ದರು

Related Articles

Leave a Reply

Your email address will not be published. Required fields are marked *

Back to top button