ಬೆಂಗಳೂರು

ಪುನೀತ್ ಮನೆಗೆ ನಿರ್ದೇಶಕ ರಾಜಮೌಳಿ ಭೇಟಿ

ಬೆಂಗಳೂರು

ಅಕಾಲಿಕ ನಿಧನ ಹೊಂದಿದ ಅಪ್ಪು ಮನೆಗೆ ಇಂದು ಟಾಲಿವುಡನ ಹೆಸರಾಂತ
ನಿರ್ದೇಶಕ ರಾಜಮೌಳಿ ಕುಟುಂಬ ಸಮೇತವಾಗಿ ಭೇಟಿ‌ ನೀಡಿ ಅಪ್ಪು ಕುಟುಂಬಸ್ಥರಿಗೆ ಸಮಾಧಾನ ಹೇಳಿದ್ರು.

ಈ ವೇಳೆ ಮಾತನಾಡಿದ ರಾಜಮೌಳಿ ನನಗೆ
ಏನು ಹೇಳಬೇಕೊ.‌ ಗೊತ್ತಾಗ್ತಿಲ್ಲ

ಅವರು ಇಲ್ಲ ಅನ್ನೋದನ್ನ ಊಹಿಸಿಕೊಳ್ಳೋಕೂ ಸಾಧ್ಯವಾಗ್ತಿಲ್ಲ.

ಅವರನ್ನ ಭೇಟಿಯಾಗಿ ಮಾತಾನಾಡಿದಾಗ ಸ್ಟಾರ್ ಜೊತೆ ಮಾತನಾಡಿದ ಹಾಗೆ ಅನ್ನಿಸಿರಲಿಲ್ಲ.

ಪಕ್ಕದ ಮನೆಯವರ ಜೊತೆ ಮಾತನಾಡಿದ ಹಾಗೆ ಅನಿಸ್ತಿತ್ತು ಅಷ್ಟೊಂದು ಆತ್ಮಿಯತೆ‌ ಇತ್ತು.

ಅವರ ಸಾಮಾಜಿಕ ಕಾರ್ಯಗಳು ಜಗತ್ತಿಗೆ ಗೊತ್ತಾಗಿದೆ

ಹೇಗೆ ಬದುಕ ಬೇಕು, ಹೇಗೆ ಸಮಾಜಿಕ ಕಾರ್ಯಗಳನ್ನ ಮಾಡಬೇಕೆಂದು ಮಾದರಿಯಾಗಿದ್ದಾರೆ.

ರಾಜ್ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ

ಇಂತಹ ನಟನ್ನ ಕಳೆದು ಕೊಂಡಿದ್ದನ್ನ ಊಹಿಸಿಕೊಳ್ಳೊಕೆ ಆಗ್ತಿಲ್ಲ ಎಂದರು.

Related Articles

Leave a Reply

Your email address will not be published. Required fields are marked *

Back to top button