ಸ್ಥಳೀಯ ಸುದ್ದಿ

ಪೇಢಾನಗರಿಯಲ್ಲೊಬ್ಬ ಪವರ್ ಸ್ಟಾರನ ವಿಶೇಷ ಅಭಿಮಾನಿ

ಬೆಂಗಳೂರು

ಧಾರವಾಡದ ಅಪ್ಪು ಅಭಿಮಾನಿಯೊಬ್ಬ ಮನೆ ದೇವರ ಫೋಟೊ ರೀತಿಯಲ್ಲಿ ಅಪ್ಪುವನ್ನು ಆರಾಧಿಸಿ ಪೂಜಿಸುತ್ತಿದ್ದಾರೆ.

ಮಾರ್ಚ 17 ಕ್ಕೆ ಅಪ್ಪು ಬರ್ತಡೆ ಇರುವುದರಿಂದ ಅವರ ಫೋಟೊವನ್ನು ಮನೆಗೆ ಹಾಕಿ ದೀಪದ ಅಲಂಕಾರ ಮಾಡಿದ್ದಾರೆ.

ಅವರು ಬೇರೆ ಯಾರೂ ಅಲ್ಲಾ ನಮ್ಮ ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮದ ಬಾಳು ಹುಣಶಿಕಟ್ಟಿ.

ಕಾಲೇಜು ದಿನಗಳಿಂದ ಪುನೀತ್ ಅವರನ್ನು ನೋಡಿಕೊಂಡು ಅವರ ಸಿನಿಮಾ ಡೈಲಾಗಳನ್ನು ಹೇಳುತ್ತಾ ಬೆಳೆದವರು ಈ‌ ವಿಶೇಷ ಅಭಿಮಾನಿ.

2002 ರಲ್ಲಿ ಅಪ್ಪು ಸಿನಿಮಾ ನೋಡಿದ ನಂತರ ಇದುವರೆಗೂ ಯಾವುದೇ ಪುನೀತ ರಾಜಕುಮಾರ ಸಿನಿಮಾವನ್ನು ಥೇಟರನಲ್ಲಿ ಹೋಗಿ ಫಸ್ಟ ಡೇ ಫಸ್ಟ್ ಶೋ ನೋಡುವುದನ್ನು ಬಿಟ್ಟಿಲ್ಲಾ ಈ ಅಭಿಮಾನಿ

ಖಾಸಗಿ‌ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುವ ಈ ಅಭಿಮಾನಿಗೆ‌ ಪುನೀತ್ ಅಗಲಿಕೆ ಸಾಕಷ್ಟು ಆಘಾತ ತಂದಿದೆ.

ಧಾರವಾಡ- ಹುಬ್ಬಳ್ಳಿಯಲ್ಲಿ ಬಹುತೇಕ ಚಿತ್ರೀಕರಣ ಆದ ಯುವರತ್ನ ಸಿನಿಮಾವನ್ನು ಬಾಳು ನೋಡಿದ್ದು ಪುನೀತ್ ಅವರ ಕೊನೆಯ ಚಿತ್ರ. ‌

ಪುನೀತ್ ಅವರ ಸಮಾಧಿವರೆಗೂ ಹೋಗಿ ಬಂದಿರುವ ಈ ಅಭಿಮಾನಿ ಪುನೀತ್ ಭಾವಚಿತ್ರ ಇರುವ ಟೀ ಶರ್ಟ್ ಹಾಕಿ ಅಭಿಮಾನ ಕೂಡ ಮೆರೆದಿದ್ದರು. ಈ ಬಗ್ಗೆ ಪವರ್ ಸಿಟಿ ನ್ಯೂಸ್ ಕನ್ನಡದಲ್ಲಿ ಈ ಹಿಂದೆ ಸುದ್ದಿ ಪ್ರಸಾರ ಮಾಡಲಾಗಿತ್ತು.

ಪುನೀತ ಅವರು ಯಾವತ್ತಿಗೂ ನಮ್ಮ ಜೋತೆಗೆ ಇರ್ತಾರೆ. ಜೋತೆಗಿರದ ಜೀವ ಯಾವತ್ತಿಗೂ ಜೀವಂತ ಎನ್ನುವ ಅಭಿಮಾನದಲ್ಲಿ ಪುನೀತ ನೆನೆದು ಕಾಲ ಕಳೆಯುತ್ತಿದ್ದಾರೆ.

ಪವರ್ ಸಿಟಿ‌ನ್ಯೂಸ್ ಕನ್ನಡದಿಂದಲೂ ಅಪ್ಪುಗೆ ಹ್ಯಾಪಿ ಬರ್ತಡೆ ಇನ್ ಅಡ್ವಾನ್ಸ….

Related Articles

Leave a Reply

Your email address will not be published. Required fields are marked *

Back to top button