ಸ್ಥಳೀಯ ಸುದ್ದಿ

15 ದಿನಗಳಿಗೆ ಒಮ್ಮೆ ಉಚಿತ ಹೊಮಿಯೋಪತಿ ಚಿಕಿತ್ಸೆ.

ಧಾರವಾಡ

ಧಾರವಾಡ ಮಹಾತ್ಮಾ ಬಸವೇಶ್ವರ ನಗರದಲ್ಲಿ ಇನ್ನು ಮುಂದೆ 15 ದಿನಗಳಿಗೆ ಒಮ್ಮೆ ಕಡ್ಡಾಯವಾಗಿ ಉಚಿತ ಆರೋಗ್ಯ ಚಿಕೆತ್ಸೆ ಶಿಬಿರ ನಡಯಲಿದೆ.

ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ರವರು ಹಾಗೂ ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಪ್ರಹ್ಲಾದ ಜೋಷಿ ರವರ ಅಭಿಮಾನಿ ಬಳಗದ ವತಿಯಿಂದ ಉಚಿತ ಹೊಮಿಯೋಪತಿ ಚಿಕಿತ್ಸೆಯನ್ನ ತವನಪ್ಪ ಅಷ್ಟಗಿ ಅಧ್ಯಕ್ಷರು ಕರ್ನಾಟಕ ಬಯಲು ಸೀಮೆ ಪ್ರದೇಶಅಭಿವೃದ್ಧಿ ಮಂಡಳಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಇರೇಶ ಅಂಚಟಗೆರಿ ಸೇರಿ 5/03/2023 ರಂದು ಚಾಲನೆ ನೀಡಿದ್ದರು.

ಈಗ ಮುಂದುವರಿದು ಇದೇ ಕಾರ್ಯಕ್ರಮ ಜನರ ಆರೋಗ್ಯದ ಹಿತದೃಷ್ಟಿಯಿಂದ
ಪ್ರತಿ 15 ದಿನಕೊಮ್ಮೆ ವೈದ್ಯರಾದ ಶ್ರೀಕಾಂತ ಮೀರಜಕರ ಉಚಿತವಾಗಿ ಚಿಕಿತ್ಸೆ ಕೊಡುತ್ತಿದ್ದಾರೆ.
ಇದರ ಸದುಪಯೋಗವನ್ನ ಸಾರ್ವಜನಿಕರು ಪಡೆದುಕೊಂಡರು.

ವೈದ್ಯರುಗಳಾದ ಶ್ರೀಕಾಂತ ಮೀರಜಕರ ಇಂದು ರೊಗಿಗಳಿಗೆ ಉಚಿತ ಚಿಕಿತ್ಸೆ ಮತ್ತು ಔಷಧ ನೀಡಿದರು.

ಈ ಸಂದರ್ಭದಲ್ಲಿ ಶೇಖರ ಕವಳಿ, ಶ್ರೀಕಾಂತ ಕ್ಯಾತಪ್ಪನವರ, ಶಂಕರ ಪರಿಟ್ ಅಶೋಕ ಶೆಟ್ಟರ, ಎಪ್, ಪಿ ಪಾಟೀಲ್, ವಿನಾಯಕ ನಾಗಮ್ಮನವರ ರವರು ನಾಗರಿಕರಿಗೆ ಈ ಆರೋಗ್ಯ ಸೇವೆಯನ್ನ ಸಿಗುವಂತೆ ಮಾಡಿದರು.

ಮುಂದಿನ ಉಚಿತ ಆರೋಗ್ಯ ತಪಾಸಣೆ
03/04 2023 ಸೊಮವಾರದಂದು ಶ್ರೀಕಾಂತ ಕ್ಯಾತಪ್ಪನವರ ಮನೆಯ ಮಹಡಿಯ ಮೇಲೆ ಉಚಿತವಾಗಿ ಚಿಕಿತ್ಸೆ ಕೊಡಲು ವೈದ್ಯರು ಇಚ್ಚಿಸಿದ್ದು, ಇದರ ಸಂಪೂರ್ಣ ಸದುಪಯೊಗ ಪಡೆದುಕೂಳ್ಳಬೇಕೆಂದು ತವನ್ನಪ್ಪ ಅಷ್ಟಗಿ ಬಳಗದ ಅಭಿಮಾನಿಗಳು ತಿಳಿಸಿದ್ರು.

Related Articles

Leave a Reply

Your email address will not be published. Required fields are marked *

Back to top button